ಪೊಳಲಿ: ಅಕಾಡೆಮಿ ಆಫ್ ಒರಿಯಂಟಲ್ ಮಾರ್ಷಲ್ ಆಟ್ರ್ಸ್ ಶೊರಿನ್-ಆರ್ವೈಯು-ಕರಾಟೆ ಮತ್ತು ಕುಬುಡೊ ಅಸೊಸಿಯೇಶನ್ ಇಂಡಿಯಾ ಮುಖ್ಯ ತರಬೇತುದಾರ ಹಾಗೂ ಪರೀಕ್ಷಕ ಮೊಹಮ್ಮದ್ ನದೀಮ್ ಇಲ್ಲಿನ ರಾಮಕೃಷ್ಣ ತಪೋವನದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಸಮರ ಕಲೆಗಳ (Martial Arts) ಬೆಲ್ಟ್ ಟೆಸ್ಟ್ ಮಂಗಳವಾರ ನಡೆಸಿದರು.
ಈ ವೇಳೆ ನಡೆದ ಸ್ಪರ್ಧೆಯಲ್ಲಿ 11 ವಿದ್ಯಾರ್ಥಿಗಳು yellow belt ಹಾಗೂ ವಿದ್ಯಾರ್ಥಿನಿ ವೆನಿಲ್ಲಾ ಮಣಿಕಂಠ Black beltನಲ್ಲಿ ಉತ್ತೀರ್ಣರಾಗಿದ್ದು, ಇವರಿಗೆ ರಾಮಕೃಷ್ಣ ತಪೋವನ ಆಶ್ರಮದ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಬೆಲ್ಟ್ ಮತ್ತು ಪ್ರಶಸ್ತಿ ಪತ್ರ ವಿತರಿಸಿದರು.
ಪ್ರಸ್ತುತ ಎಲ್ಲಾ ಸ್ಪರ್ಧಿಗಳು ಕರಾಟೆ ಮಾಸ್ಟರ್ ಮಂಜೇಶ್ವರ ರಾಜೇಶ್ರವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.


