ಹೆಬ್ರಿ: “ಆದಿ ಗ್ರಾಮೋತ್ಸವಯುವಗೌರವ ಪ್ರಶಸ್ತಿ”ಗೆ ಜೆಸಿಐ ವಲಯ ಉಪಾಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭುಕರ್ವಾಲು ಆಯ್ಕೆಯಾಗಿದ್ದಾರೆ.
ಜ.25ರಂದು ಅಜೆಕಾರುಚಿಕ್ಕಿ ನಾಯ್ಕ ವೇದಿಕೆಯಲ್ಲಿ ನಡೆಯಲಿರುವ ಆದಿಗ್ರಾಮೋತ್ಸವ ಸಮಾರಂಭದಲ್ಲಿ ರಾಘವೇಂದ್ರ ಪ್ರಭುಕರ್ವಾಲು ಅವರಿಗೆ ಆದಿ ಗ್ರಾಮೋತ್ಸವಯುವಗೌರವ ಪ್ರಶಸ್ತಿ ಪ್ರಶಸ್ತಿ ಪ್ರದಾನಿಸಲಾಗುವುದು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಗೋಪಾಲ ಭಂಡಾರಿ, ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ತಿಂಗಳೆ ವಿಕ್ರಮಾರ್ಜುನ ಹೆಗಡೆ, ಜಿ.ಪಂ. ಸದಸ್ಯಉದಯ ಕೋಟ್ಯಾನ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

