ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಬಗ್ಗೆ ಸಮಾಲೋಚನಾ ಸಭೆಯು ಡಿ.10ರಂದು ಭಾನುವಾರ ಸಾಯಂಕಾಲ 5.30 ಕ್ಕೆ ಮಂಗಳೂರಿನ ಬಳ್ಳಾಲ್ ಬಾಗ್ ಪತ್ತುಮುಡಿಸೌಧ (ಜನತಾ ಡಿಲೆಕ್ಸ್)ಇದರ ಒಂದನೇ ಮಹಡಿಯಲ್ಲಿ ಜರುಗಲಿದೆ.
ಅಧ್ಯಕ್ಷತೆಯನ್ನು ಅರಣ್ಯ ಸಚಿವ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಿ.ರಮಾನಾಥ ರೈ ಅವರು ವಹಿಸಲಿದ್ದಾರೆ.ಜೀಣೋದ್ಧಾರ ಸಮಿತಿಯ ಉಪಾಧ್ಯಕ್ಷ ಲೋಕ ಸಭಾ ಸದಸ್ಯ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಉಪಸ್ಥಿತರಿರುವರು. ಈಸಭೆಗೆ ಧಾರ್ಮಿಕ ಮುಖಂಡರು, ಸಮಾಜದ ಪ್ರಮುಖರು,ಜನಪ್ರತಿನಿಧಿಗಳು ಮತ್ತು ಧಾನಿಗಳ ಉಪಸ್ಥಿತಿಯಲ್ಲಿ ಜರಗುವುದು ಭಕ್ತಾಧಿಗಳು ಹೆಚ್ಚಿನ ಸಂಖ್ಯಯಲ್ಲಿ ಈ ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆಗಳನ್ನು ನೀಡಿ ದೇವಿ ಕ್ರಪೆಗೆ ಪಾತ್ರರಾಗಲು ವಿನಂತಿ ಶ್ರೀ ರಾಜರಾಜೇಶ್ವರೀ ದೇವಳದ ಪ್ರಕಟನೆ ತಿಳಿಸಿದೆ.
