ಕೈಕಂಬ: ಮುತ್ತೂರು ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ದಶಮಾನೋತ್ಸವ ಸಂಭ್ರಮಾಚರಣೆ ನೂತನ ತರಗತಿ ಕೊಠಡಿಗಳ ಉದ್ಘಾಟನೆಯನ್ನು ಬಿ ರಮಾನಾಥ ರೈ ಶನಿವಾರ ಉದ್ಘಾಟಿಸಿದರು. 
ಕೊಳವೂರು ಪಂಚಾಯತ್ ಮಾಜಿ ಛೇರ್ಮೆನ್ ಮುತ್ತೂರು ಗರೋಡಿ ದಿ. ಎಂ. ದೊಡ್ಡಯ್ಯ ಶೆಟ್ಟಿ ಯವರ ಸ್ಮರಣಾರ್ಥವಾಗಿ ಅವರ ಮಕ್ಕಳು ಬಹುಮಾನಗಳನ್ನು ನೀಡಿದರು.
ನೂತನ ತರಗತಿ ಕೊಠಡಿಗಳ ಉದ್ಘಾಟನೆಯನ್ನು. ಅಧ್ಯಕ್ಷತೆಯನ್ನು ಶಾಸಕ ಬಿ.ಎ. ಮೊಹಿಯುದ್ದೀನ್ ಬಾವ ವಹಿಸಿದ್ದರು.
ಸ್ಮರಣ ಸಂಚಿಕೆ ಬಿಡುಗಡೆಯನ್ನು ದ.ಕ.ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾಡಿದರು. ಮಾಜಿ ರಾಜ್ಯಸಭಾ ಸದಸ್ಯೆ ಬಿ. ಜಯಶ್ರೀ ಅವರ ಅನುದಾನದಿಂದ ಮಂಜೂರಾದ 20ಲ್ಷಕ್ಷ ವೆಚ್ಚದ ಅನುದಾನದ ನೂತನ ಕೊಠಡಿಯನ್ನು ಉದ್ಘಾಟಿಸಿ ಕವನ ಸಂಕಲನ ಬಿಡುಗಡೆಯನ್ನು ಮಾಡಿದರು.
ಗಣ್ಯರಿಗೆ ಸನ್ಮಾನ ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಅವರನ್ನು ಹಾಗೂ ಶಾಸಕ ಬಿ.ಎ. ಮೊಹಿಯುದ್ದೀನ್ ಬಾವ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 
ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೋನು, ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ನಾಗಮ್ಮ, ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ಧನ ಗೌಡ, ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್, ಪ್ರಾಂಶುಪಾಲರ ಸಂಘದ ಅಧ್ಯಕ್ಷರು ಎಲ್ವಿರಾ ಫಿಲೋಮಿನ, ಕಲಾ ನರ್ದೇಶಕರು ಮುತ್ತೂರು ಬಾಳಿಕೆ ಶಶಿಧರ ಅಡಪ, ಮೆಸ್ಕಾಂ ನಿರ್ದೇಶಕ ಸುರೇಂದ್ರ ಬಿ. ಕಾಂಬ್ಳಿ, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಹಿರಣ್ಯಾಕ್ಷ ಕೋಟ್ಯಾನ್, ದಶಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ತಾ.ಪಂ. ಸದಸ್ಯ ನಾಗೇಶ್ ಶೆಟ್ಟಿ, ಪ್ರೌಢಶಾಲಾ ವಿಭಾಗ ಮುಖ್ಯ ಶಿಕ್ಷಕರು ಸಿಪ್ರಿಯನ್ ಡಿ ಸೋಜ, ದಶಮಾನೋತ್ಸವ ಸಮಿತಿ ಕೋಶಾಧಿಕಾರಿ ಪ್ರವೀಣ್ ಆಳ್ವ, ದಶಮಾನೋತ್ಸವ ಸಮಿತಿ ಕಾರ್ಯದರ್ಶಿ ಪ್ರಾಂಶುಪಾಲ ನಿರಂಜನ್ .ಎ, ಸ್ವಾಗತಿಸಿ ವರಧಿ ವಾಚಿಸಿದರು. ಶಿಕ್ಷಕಿ ರಂಜಿತಾ ಕಾರ್ಯಕ್ರಮ ನಿರೂಪಿಸಿದರು. ಎಸ್.ಡಿ.ಎಂ.ಸಿ. ಕಾರ್ಯಾಧ್ಯಕ್ಷ ಚಂದ್ರಹಾಸ ಶೆಟ್ಟಿ ವಂದಿಸಿದರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಮೊಹಮ್ಮದ್ ಅನ್ಸಾರ್ ಉಪಸ್ಥಿತರಿದರು.








