ಮಂಗಳೂರು: ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಷಷ್ಠಿ ಉತ್ಸವದಲ್ಲಿ ಸಾವಿರಾರು ಮಂದಿ ಭಾಗಿಯಾದರು.ಷಷ್ಠಿ ಸಂಭ್ರಮದ ವೇಳೆ ಬ್ರಹ್ಮರಥೋತ್ಸವ ನಡೆಯಿತು. ಭಕ್ತರು ಮುಂಜಾನೆಯಿಂದಲೇ ದೇವರ ದರ್ಶನಕ್ಕಾಗಿ ಸರದಿ ಸಾಲಿನಲ್ಲಿ ನಿಂತು ಕಾದು ದೇವರ ದರ್ಶನ ಪಡೆದುಕೊಂಡರು. ಮಧ್ಯಾಹ್ನ ಮಹಾಪೂಜೆ ಅನ್ನಸಂತರ್ಪಣೆ ನಡೆಯಿತು.

0006

24 kudupu 1

24 kudupu2

24 kudupu4ಮದ್ಯಾಹ್ನ  12.30ಕ್ಕೆ  ದೇವರ ಬಲಿ ಉತ್ಸವ ನಡೆಯಿತು.   ಬಳಿಕ ಸಾವಿರಾರು ಭಕ್ತರ ಸಮುಖ್ಖದಲ್ಲಿ  ದೇವರು ರಥದಲ್ಲಿ ಆಗಿ  ರಥಕ್ಕೆ ತೆಂಗಿನಕಾಯಿ ಹೊಡೆದು ಬಳಿಕ ರಥಬೀದಿಯಲ್ಲಿ ಬ್ರಹ್ಮ ರಥೋತ್ಸವ   ಜರುಗಿತು. ನಾಗಬನದಲ್ಲಿ ತಂಬಿಲ ಸೇವೆ, ಪಂಚಾಮೃತ ಅಭಿಷೇಕ, ಕ್ಷೀರ ಅಭಿಷೇಕ, ಸೀಯಾಳ ಅಭಿಷೇಕಗಳು ನಡೆದವು.ಮಂಗಳೂರು ಗ್ರಾಮಾಂತರ ಪೊಲೀಸರು  ಬಂದೋಬಸ್ತ್  ಮಾಡಿದರು.

*ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಕೊಡಿ.

By suddi9

Leave a Reply

Your email address will not be published. Required fields are marked *