ಮಂಗಳೂರು: ನಗರದ ಸುತ್ತಮುತ್ತಲಲ್ಲಿಕಾರ್ಯಾಚರಿಸುತ್ತಿರುವ10ಅನಾಥಾಶ್ರಮದದ ಸುಮಾರು 600 ಮಕ್ಕಳಿಗೆ ಒದಗಿದಅವಿಸ್ಮರಣೀಯ ದಿನ, ಸಂತಸ, ಉತ್ಸಾಹದವಾತಾವರಣ, ಸುವರ್ಣ ಅವಕಾಶ, ಸಂಭ್ರಮದ ದಿನ, ಒಡನಾಟದಅನುಬಂಧ ಮರೆಯಲಾಗದ ಪ್ರಬಂಧ, ಪೋಷಕರಪ್ರೀತಿ ವಾತ್ಸಲ್ಯದಿಂದ ವಂಚಿತರಾದ ಮುಗ್ಧ ಮಕ್ಕಳು ಇತರಆಶ್ರಮದ ಮಕ್ಕಳ ಜೊತೆಗೆ ಬೆರೆತು. ಮುಕ್ತವಾಗಿ ತಮ್ಮದುಃಖ, ಕಷ್ಟ, ಚಿಂತೆ, ವೇದನೆಯನ್ನು ಮರೆತು, ಹುರುಪು ಹಾಗೂ ಉತ್ಸಾಹದಿಂದ ನಕ್ಕು ನಲಿದಾಡಿದರು.ಸ್ನೇಹ ಮತ್ತುಒಡನಾಟವನ್ನು ಸ್ಮರಿಸಿ ತಮ್ಮ ವೈಯುಕ್ತಿಕ ವಿವಿಧ ಸಿಹಿ ಕಹಿ ಅನುಭವಗಳನ್ನು ವಿನಿಮಯಿಸಿದರು.ಆಕರ್ಷಣೀಯ ಪಥ ಸಂಚಲನ ನೀಡಿದಬಳಿಕ ಸ್ಫೂರ್ತಿ ಮತ್ತುಉತ್ಸಾಹದಿಂದತಮ್ಮಲ್ಲಿ ಹುದುಗಿದಕ್ರೀಡಾ ಸಾಮಥ್ರ್ಯ ಮತ್ತುಕಲಾಪ್ರತಿಭೆಯನ್ನು ಪ್ರದರ್ಶಿಸಿ ಸಭಿಕರನ್ನು ರಂಜಿಸಿದರು.ಪ್ರತಿಯೊಬ್ಬರ ಮುಖದ ಮೇಲೆ ಮಂದಹಾಸಎದ್ದುಕಾಣುತಿತ್ತು.
ರೋಟರಿಕ್ಲಬ್ ಮಂಗಳೂರು ಸೆಂಟ್ರಲ್ ಮತ್ತುರೋಟರ್ಯಾಕ್ಟ್ಕ್ಲಬ್ ಮಂಗಳೂರು ಸಿಟಿ ಜಂಟಿಆಶ್ರಯದಲ್ಲಿರೋಟರಿ19ನೇ ವಾರ್ಷಿಕ“ಅನಾಥಾಶ್ರಮ ಮಕ್ಕಳ ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧಾಕೂಟ ಹಾಗೂ ಉತ್ಸವ”ವನ್ನುತಾ. 19.11.2017ರಂದು ನಗರದರಾಮಕೃಷ್ಣಕಾಲೇಜಿನಆವರಣದಲ್ಲಿಆಯೋಜಿಸಲಾಗಿತ್ತು.
ನಗರದ ಪೋಲೀಸ್ಆಯುಕ್ತರಾದಟಿ.ಆರ್. ಸುರೇಶ್ಉದ್ಘಾಟನಾ ಭಾಷಣದಲ್ಲಿ ಪೋಷಕರ ಪ್ರೀತಿ ವಾತ್ಸಲ್ಯದಿಂದ ವಂಚಿತ ಮಕ್ಕಳ ಉತ್ಸಾಹಕ್ಕೆ ಸ್ಪಂದಿಸಿ ಸೂಕ್ತ ವೇದಿಕೆಯನ್ನು ಒದಗಿಸಿ, ಪ್ರೋತ್ಸಾಹ ನೀಡುವರೋಟರಿ ಸಂಸ್ಥೆಯ ಸಾಮಾಜಿಕ ಕಳವಳಿ ಮತ್ತು ನಿಸ್ವಾರ್ಥ ಸಮಾಜ ಸೇವಾ ಮನೋಭಾವ ಶ್ಲಾಘನೀಯ ಮತ್ತುಇತರ ಸೇವಾ ಸಂಸ್ಥೆಗಳಿಗೆ ಮಾದರಿಎಂದು ನುಡಿದುಸಮಾಜದಲ್ಲಿರುವಅನಾಥ ಮಕ್ಕಳ ಅಸಮಾನತೆ ಮತ್ತುಅನಾಥ ಪ್ರಜ್ಞೆಯನ್ನು ನಿರ್ಮೂಲನೆಗೊಳಿಸಿ ಅವರಕ್ಷೇಮಾಭಿವೃದ್ಧಿಗೆ ಶ್ರಮಿಸಬೇಕುಎಂದು ಸಲಹೆ ನೀಡಿಸ್ಪರ್ಧಾಳುಗಳಿಗೆ ಶುಭ ಹಾರೈಸಿದರು.

ಸಂಘಟನಾಅಧ್ಯಕ್ಷರೋ| ಡಾ.ದೇವದಾಸ್ರೈಅವರು ಈ ವಾರ್ಷಿಕಕಾರ್ಯಕ್ರಮವುತಮ್ಮ ಸಂಸ್ಥೆಯ ಪ್ರತಿಷ್ಠಿತ ಸಮಾಜ ಸೇವಾ ಚಟುವಟಿಕೆಯಯೋಜನೆಯಅಂಗವಾಗಿದ್ದು, ಅನಾಥಾಶ್ರಮ ಮಕ್ಕಳ ಪ್ರತಿಭೆಯನ್ನು ಗುರುತಿಸಿ ವೇದಿಕೆಯನ್ನು ಒದಗಿಸಿ ಅವರಉತ್ಸಾಹವನ್ನು ಪ್ರೋತ್ಸಾಹಿಸಿ, ಬೆಂಬಲ ನೀಡಿ. ಅವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ಸೇರಿಸಿಕೊಳ್ಳುವುದು ನಮ್ಮ ಸಂಸ್ಥೆಯ ಮುಖ್ಯಧ್ಯೇಯಉದ್ದೇಶಎಂದು ಮಾಹಿತಿ ನೀಡಿದರು.
ಸಂಸ್ಥೆಯಅಧ್ಯಕ್ಷರೋ| ರೇಮಂಡ್ ಡಿ’ ಕುನ್ಹಾ ಸ್ವಾಗತಿಸಿದರು.ರೋಟರಿ ವಲಯ 2 ಸಹಾಯಕಗವರ್ನರ್ರಾದರೋ| ನವೀನ್ಕುಮಾರ್,ಎಸ್.ಕೆ.ಎಸ್. ಸಂಸ್ಥೆಯಕಾರ್ಯನಿರ್ವಾಹಕ ನಿರ್ದೇಶಕ ಸನತ್ ಶೆಟ್ಟಿ, ರೋಟರಿ ಸಂಸ್ಥೆಯ ಸ್ಥಾಪನಾಧ್ಯಕ್ಷರೋ| ಪ್ರೇಮನಾಥ್ಕುಡ್ವ, ರೋಟರ್ಯಾಕ್ಟ್ ಸಂಸ್ಥೆಯಅಧ್ಯಕ್ಷೆರೋ| ಪವಿತ್ರಆಚಾರ್ಯ, ಕಾರ್ಯದರ್ಶಿ, ರೋ| ಶರತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ರೋ| ಪ್ರಕಾಶ್ಚಂದ್ರ ವಂದಿಸಿದರು, ರೋ| ಕೆ.ಎಂ. ಹೆಗ್ಡೆಕಾರ್ಯಕ್ರಮ ನಿರೂಪಿಸಿದರು.


