ಮಂಚಿ ನೂಜಿಬೈಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಸ್ವಚ್ಛತಾ ಆಂದೋಲನದ ಬಗ್ಗೆ ಮಾಹಿತಿ ಕಾರ್ಯಕ್ರಮ ಮತ್ತು ಶಾಲಾ ಮಕ್ಕಳು ಮತ್ತು ಪೋಷಕರು ಹಾಗೂ ಶಿಕ್ಷಕರು ಸ್ವಚ್ಛತಾ ಕಾರ್ಯಕ್ರಮ ನಡೆಸಿದರು. ಮುಖ್ಯ ಶಿಕ್ಷಕ ಲೋಕನಾಥ ಬಿ ಮಾಹಿತಿ ನೀಡಿದರು. ಶಾಲಾ ಸಂಚಾಲಕ ನೂಜಿಬೈಲು ಶಾಂತಲಾ ನಾರಾಯಣ ಭಟ್ ಮತ್ತು ಶಾಲಾಭಿವೃದ್ಧಿ ಸಮಿತಿ ಸದಸ್ಯರಯ ಉಪಸ್ಥಿತರಿದ್ದರು. ಶಿಕ್ಷಕ ಚಂದ್ರಮೋಹನ ಎನ್ ಸ್ವಾಗತಿಸಿದರು. ಲಿಂಗಪ್ಪ ಬಿ ವಂದಿಸಿದರು. ಈ ಸಂರ್ಭದಲ್ಲಿ ಪೋಷಕರಾದ ಹರಿಶ್ಚಂದ್ರ, ಸೋಮನಾಥ, ಸಂಜೀವ ಮತ್ತು ಮಾಧವ ಇವರ ನೇತೃತ್ವದಲ್ಲಿ ಶಾಲಾ ಪೀಠೋಪಕರಣಗಳನ್ನು ದುರಸ್ಥಿ ಮಾಡಿದರು.

