ಪೊಳಲಿ: ಶ್ರೀ ರಾಜರಾಜೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ಅಪ್ಪದ ಪೂಜೆಯ ಪ್ರಯುಕ್ತ ಶನಿವಾರ ಬೆಳಗ್ಗೆ ಭಜನೆಗೆ ದೇವಳದ ಅರ್ಚಕ ನಾರಾಯಣ ಭಟ್ ಚಾಲನೆ ನೀಡಿದರು. ಪವಿತ್ರಪಾಣಿ ಮಾಧವ ಭಟ್, ದೇವಳದ ಆಡಳಿತ ಮಕ್ತೇಸರ, ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಚೇರಾ ಸೂರ್ಯನಾರಾಯಣ ರಾವ್, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಇದ್ದರು.
ಶನಿವಾರ ಭಜನೆಯು ಬೆಳಗ್ಗೆ 8 ಗಂಟೆಗೆ ರಾಜರಾಜೇಶ್ವರೀ ಭಜನಾಮಂಡಳಿವರಿಂದ ಪ್ರಾರಂಭಗೊಂಡು ಮರುದಿನ ಭಾನುವಾರ ಸೂರ್ಯೋಧಯದವರೆಗೆ ನಾನಾ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ಜರುಗಲಿದೆ. ಶನಿವಾರ ರಾತ್ರಿ ಅಪ್ಪದಪೂಜೆ ನೆರವೇರಲಿದೆ.


