ಕೈಕಂಬ:ಕುಪ್ಪೆಪದವಿನ ಮರೈನ್ ಕಾಲೇಜಿನ ವಿದ್ಯಾರ್ಥಿಗಳು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕುಪ್ಪೆಪದವಿನಲ್ಲಿ ಮೆರವಣಿಗೆ ನಡೆಸಿದರು. ಹುಲಿವೇಷ, ನಾಸಿಕ್ ಬ್ಯಾಂಡ್ ಸಹಿತ ಅಲಂಕೃತ ವಾಹನದಲ್ಲಿ ಭುವನೇಶ್ವರೀಯ ಮೆರವಣಿಗೆ ನಡೆಯಿತು. ರಾಜ್ ಕಿರಣ್ ಬಲ್ಲಾಲ್, ಕೃಷ್ಣರಾಜ್, ಎ.ಬಿ.ವಿ.ಪಿಯ ವಿಶ್ವನಾಥ ಮೆರವಣಿಗೆ ನೇತೃತ್ವ ವಹಿಸಿದ್ದರು.


