ವಿಟ್ಲ: ತೋಟಗಾರಿಕಾ ಇಲಾಕೆ ಜಿಲ್ಲಾ ಪಂಚಾಯತ್ ಬಂಟ್ವಾಳ ಹಾಗೂ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ವಿಟ್ಲ ಇದರ ಸಹಯೋಗದಲ್ಲಿ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿಯಲ್ಲಿ ತಾಳೆ ಬೆಳೆ ಬೇಸಾಯ ತರಬೇತಿ ಹಾಗೂ ಪ್ರಾತ್ಯಕ್ಷಿತೆ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಪಿಂಗಾರ ಕಂಪೆನಿಯ ಉಪಾಧ್ಯಕ್ಷ ಮನೋಜ್ ಪ್ರಸಾದ್ ಶೆಟ್ಟಿ ಉದ್ಘಾಟಿಸಿದರು. ಪಿಂಗಾರ ಕಂಪೆನಿಯ ನಿರ್ದೇಶಕರುಗಳಾದ ಕೃಷ್ಣಪ್ಪ ಪೂಜಾರಿ, ಸದಾನಂದ ಗೌಡ, ಪದ್ಮನಾಭ ಶೆಟ್ಟಿ, ವಿಶ್ವನಾಥ ಅಳಿಕೆ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರದೀಪ್, ತೋಟಗಾರಿಕಾ ಇಲಾಕೆಯ ಬಾಲಕೃಷ್ಣ ಭಟ್ ಉಒಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಗೋವಿಂದ ಭಟ್ ಉರಿಮಜಲು ತಮ್ಮ ತೋಟದಲ್ಲಿ ತಾಳೆಮರದ ಪ್ರಾತಿಕ್ಷತೆಯೊಂದಿಗೆ ಮಾಹಿತಿ ನೀಡಿದರು.
