ಕೈಕಂಬ:ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿಯಲ್ಲಿ ದೇವಳದ ಜೀರ್ಣೋದ್ಧಾರದ ಅಂಗವಾಗಿ ಶ್ರೀ ಉಳ್ಳಾಕ್ಲು, ಮಂಗ್ರತ್ತಾಯ ಹಾಗೂ ಐವರು ದೈವಗಳ ಅನುಜ್ಞಕಲಶ ಹಾಗೂ ಧನ್ವಂತರಿ ಹೋಮ ಮತ್ತು ಸಂಜೀವಿನಿ ಮೃತ್ಯುಂಜಯ ಹೋಮವು ಕ್ಷೇತ್ರದ ತಂತ್ರಿಗಳಾದ ಸುಬ್ರಹ್ಮಣ್ಯ ಹಾಗೂ ವೆಂಕಟೇಶ್ ಅವರ ನೇತ್ರತ್ವದಲ್ಲಿ ಅ.5ರಂದು ಗುರುವಾರ ಜರುಗಿತು.

ದೇವ ಳದ ಅರ್ಚಕರಾದ ಪೊಳಲಿ ಮಾಧವ ಭಟ್, ನಾರಾಯಣ ಭಟ್, ರಾಮ್ಭಟ್, ದೋಟ ಪರಮೇಶ್ವರ್ ಭಟ್, ವಿಷ್ಣುಮೂರ್ತಿ ನಟ್ಟೋಜ, ಮಾಧವ ಮಯ್ಯ ಸಹಕರಿಸಿದರು, ಜಿರ್ಣೋದ್ದಾರ ಸಮಿತಿಯ ಅಧ್ಯಕ್ಷ ಸಚಿವ ರಮಾನಾಥ ರೈ, ಜಿರ್ಣೋದ್ದಾರ ಸಮಿತಿಯ ಕಾರ್ಯದರ್ಶಿ ಹಾಗೂ ದೇವಳದ ಮೊಕ್ತೇಸರರಾದ ಉಳಿಪಾಡಿಗುತ್ತು ತಾರನಾಥ ಆಳ್ವ,ಉಳಿಪಾಡಿ ಗುತ್ತು ರಾಜೇಶ್ ನಾಯಕ್, ಆಡಳಿತ ಮೊಕ್ತೇಸರ ಅಮ್ಮುಂಜೆಗುತ್ತು ಡಾ.ಮಂಜಯ್ಯ ಶೆಟ್ಟಿ, ಮೊಕ್ತೇಸರ ಚೇರಸೂರ್ಯನಾರಾಯಣ ರಾವ್, ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್, ಸುಭ್ರಾಯ ಕಾರಂತ್, ಚಂದ್ರಶೇಖರ್ ಭಂಡಾರಿ, ಕೃಷ್ಣರಾಜ್ ಮಾರ್ಲ, ಜೀವರಾಜ್ ಶೆಟ್ಟಿ ಅಮ್ಮುಂಜೆ ಗುತ್ತು, ಕಟ್ಟಡ ಸಮಿತಿ ಸದಸ್ಯ ಗಿರಿಧರ್ ಶೆಟ್ಟಿ, ಕಾರ್ಯನಿರ್ವಾಹಣಾಕಾರಿ ಪ್ರವೀಣ್, ಶಿವಪ್ರಸಾದ್ ಶೆಟ್ಟಿ ಅಮ್ಮುಂಜೆಗುತ್ತು, ಕೃಷ್ಣ ಕುಮಾರ್ ಪೂಂಜ, ಕರಸೇವಾಸಮಿತಿ ಸದಸ್ಯರು,ಕಟ್ಟಡ ಕಾಮಗಾರಿ ಸದಸ್ಯರು, ಜನಸಂಪರ್ಕ ಹಾಗೂ ಪ್ರಚಾರ ಸಮಿತಿ ಸದಸ್ಯರು, ಆರ್ಥಿಕ ಸಮಿತಿ ಸದಸ್ಯರು ಹಾಗೂ ಸಾವಿರ ಸೀಮೆಯ ಭಕ್ತಾಧಿಗಳು ಉಪಸ್ಥಿತರಿದ್ದರು.







