ಬಂಟ್ವಾಳ : ಮಂದಿರ ಬೆಳಗಿದೆರೆ ಮನೆ, ಮನ ಬೆಳಗಿದಂತೆ ಶ್ರದ್ಧಾಕೇಂದ್ರಗಳ ಬಳಿ ಹೈ ಮಾಸ್ಕ್ ದೀಪ ಅಳವಡಿಸುವುದರಿಂದ ಭದ್ರತೆ ಹೆಚ್ಚುತ್ತದೆ.ಯಾವುದೇ ಸಮಯದಲ್ಲಿ ನಿರ್ಭೀತಿಯಿಂದ ಮಂದಿರಗಳಿಗೆ ಪ್ರಾರ್ಥನೆ ಸಲ್ಲಿಸಲು ಅನುಕೂಲವಾಗುತ್ತಿದೆ.ಎಂದು ಜಿಲ್ಲಾ ಪಂಚಾಯತ್ ಸದಸ್ಯ ಶ್ರೀ ರವೀಂದ್ರ ಕಂಬಳಿಯವರು ಪುದು ಗ್ರಾಮದ ಹೊೈಗೆಗದ್ದೆ ಶ್ರೀ ರಾಮ ಭಜನಾ ಮಂದಿರದ ಬಳಿ ಹೈಮಾಸ್ಕ್ ದೀಪವನ್ನು ಉದ್ಘಾಟಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಮನೋಜ್ ಆಚಾರ್ಯ ನಾಣ್ಯ , ಉಪಾಧ್ಯಕ್ಷೆ ಜಯಶ್ರೀ, ಬಂಟ್ವಾಳ ಎ.ಪಿ.ಎಂ.ಸಿ. ಸದಸ್ಯರಾದ ವಿಠಲ್ ಸಾಲ್ಯಾನ್, ಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ದಿನೇಶ್ ಆರ್ ಶೆಟ್ಟಿ ಕೊಟ್ಟಿಂಜ ,ಹಿರಿಯರಾದ ಸುಬ್ರಹ್ಮಣ್ಯ ರಾವ್, ಸ್ಥಳೀಯ ಪಂಚಾಯತ್ ಸದಸ್ಯರುಗಳಾದ ಶ್ರೀಮತಿ ವಸಂತಿ ಶೆಟ್ಟಿ , ಜಗದೀಶ್ ನೆತ್ತರಕೆರೆ, ದಯಾನಂದ ಕಾಪಿಕಾಡು,ಮಂದಿರದ ಮುಖ್ಯಸ್ಥರಾದ ಶಂಕರ ಭಟ್ ಹೊೈಗೆಗದ್ದೆ, ಸ್ಥಳೀಯರಾದ ರಮೇಶ್ ಬಂಗೇರ, ಜಲಂದರ ಮತ್ತಿತರರು ಉಪಸ್ಥಿತರಿದ್ದರು.
