ಬಡಗಬೆಳ್ಳೂರು: ಪ್ರದಾನಮಂತ್ರಿಯವರ ಕನಸಿನ ಕೂಸಾದ ಉಜ್ವಲ ಯೋಜನೆಯ ಸವಲತ್ತು ಎಲ್ಲರಿಗೂ ದೊರಕುವಂತಾಗಲಿ ಮತ್ತು ದೇಶ ಉನ್ನತಿಯಾಗಲಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗಾಮದ  ಶ್ರೀ ಆದಿಶಕ್ತಿ ದೇವಸ್ಥಾನದಲ್ಲಿ ಶುಕ್ರವಾರ  ಉಜ್ವಲ ಯೋಜನೆಯನ್ನು ಉದ್ಘಾಟಿಸಿ  ಮಾತನಾಡಿದರು.
ಇಂದು ವಿಶ್ವವು ಭಾರತದ ಕಡೆ ನಿಬ್ಬೆರಗಾಗಿ ನೋಡುತ್ತಿದೆ ಎಂದರೆ ಅದಕ್ಕೆ ಮೂಲ ಕಾರಣ ದೇಶಭಕ್ತ ನಾಯಕ ಪ್ರಧಾನಿ ನರೇಂದ್ರ ಮೋದಿ.ದೇಶದಲ್ಲಿ ಎಲ್ಲರಿಗೂ  ಸೌಲಭ್ಯ ಸಿಗಬೇಕೆಂಗಬುದು ಅವರ ಕನಸು ಈ ಕನಸು ಸಾಕಾರಗೊಳ್ಳಲೆಂಬಂತೆ ಉಜ್ವಲ ಯೋಜನೆ ಈ ಯೋಜನೆಯಂತೆ ಎಲ್ಲಾ ಬಿಪಿಲ್ ಕುಟುಂಬಗಳಿಗೆ ಅಂದರೆ 2011 ರ ನಂತರ ನೋಂದಾವಣಿಯಾದ ಬಿಪಿಎಲ್ ಕುಟುಂಬಗಳಿಗೆ ಉಚಿತ ಅನಿಲ ಸೌಲಭ್ಯ ದೊರಕುವುದು ಅದರಂತೆ ಈ ಕೂಡಲೇ ನೋದಾಯಿಸುವಂತೆ ಕರೆ ನೀಡಿದರು.21 vp nalinkumar

21 vp 2

21 vp 3

21 vp 7

21 vp 8

21 vp 6ನಂತರ ಮಾತನಾಡಿದ ದ.ಕ ಜಿಲ್ಲಾ ಬಿಜೆಪಿ ಮುಖಂಡ ಸಂಜೀವ ಮಠಂದೂರು ” ದೇಶದ ಪ್ರಗತಿಗೆ ಬಿಜೆಪಿಯ ಕೊಡುಗೆ ಅಪಾರ ಮತ್ತು ಜನರ ಭಾವನೆಗಳಿಗೆ ಬೆಲೆ ನೀಡಿದ ಸರಕಾರ ಅದು ಬಿಜೆಪಿ ಮಾತ್ರ ಜೊತೆಗೆ ಹಲವಾರು ಘಟನೆಗಳನ್ನು ಉಲ್ಲೇಖಿಸಿದ ಅವರು ಬಿಜೆಪಿಯನ್ನು ಮರು ಆಯ್ಕೆಗೊಳಿಸಬೇಕೆಂದು ಕರೆ ನೀಡಿದರು. ವೇದಿಕೆಯಲ್ಲಿ  ಮುಖಂಡರಾದ ರಾಜೇಶ್ ನಾಯ್ಕ ಉಳಿಪಾಡಿಗುತ್ತು, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಂಟ್ವಾಳ  ಬಿಜೆಪಿ ಉಪಾಧ್ಯಕ್ಷ  ದೇವಪ್ಪ ಪೂಜಾರಿ ,   ತಾ. ಪಂ ಸದಸ್ಯರಾದ ಯಶವಂತ ಪೊಳಲಿ , ಮಾಜಿ ಶಾಸಕ ರುಕ್ಮಯ ಪೂಜಾರಿ ,  ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ  ಚಂದ್ರಾವತಿ ಉಪಸ್ಥಿತರಿದ್ದರು. ಪ್ರಕಾಶ್ ಸ್ವಾಗತಿಸಿ ಶಶಿಕಿರಣ್ ಧನ್ಯವಾದಗೈದರು.

ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

By suddi9

Leave a Reply

Your email address will not be published. Required fields are marked *