ಬಂಟ್ವಾಳ;ಅಟೋರಿಕ್ಷವೊಂದರಲ್ಲಿ ತಪಾಸಣೆಯ ವೇಳೆ  ಚೂರಿ ಪತ್ತೆಯಾದ ಘಟನೆ ಭಾನುವಾರ ರಾತ್ರಿ ಪಾಣೆಮಂಗಳೂರಿನ ಹಳೆ ಸೇತುವೆಯ ಬಳಿ ನಡೆದಿದೆ. ಈಸಂಬಂಧ ಇಬ್ಬರನ್ನು ವಶ ಪಡಿಸಿರುವ ಪೊಲೀಸರು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ.ಶನಿವಾರ ಬಿ.ಸಿ.ರೋಡಿನಲ್ಲಿ ನಡೆದ ಅಹಿತಕರ ಘಟನೆಯ ಹಿನ್ನಲೆಯಲ್ಲಿ  ಅಯಕಟ್ಟಿನ ಸ್ಥಳಗಳಲ್ಕಿ ನಾಕಾಬಂಧಿ ಹಾಕಿ ವಾಹನ ತಪಾಸಣೆ ಬಿಗುಗೊಳಿಸಿದ್ದರು.

ಉಡುಪಿಜಿಲ್ಲೆಯ  ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಗೂಡಿನಬಳಿಯ ಹಳೆ ಸೇತುವೆ ಸಮೀಪ ನಾಕಾಬಂಧಿ ಹಾಕಿ ವಾಹನ ತಪಾಸಣೆಯಲ್ಲಿ ನಿರತವಾಗಿದ್ದಾಗ ಈ ಅಟೋರಿಕ್ಷದಲ್ಲಿ ಚಾಕು ಪತ್ತೆಯಾಗಿದೆಯೆನ್ನಲಾಗಿದೆ.ಅನುಮಾನಗೊಂಡ ಪೊಲೀಸರು ರಿಕ್ಷಾ ಸಹಿತ ಅದರಲ್ಲಿದ್ದ ಇಬ್ಬರನ್ನು ವಶಕ್ಕೆ ತೆಗರದುಕೊಂಡಿದ್ದಾರೆನ್ನಲಾಗಿದೆನಿಷೇದಾಜ್ನೆ ಜಾರಿಯಲ್ಲಿರುವುದರಿಂದ ಯಾವುದೇ ಮಾರಕಾಸ್ತ್ರವನ್ನು ಒಯ್ಯವುವಂತಿಲ್ಲ.ಬಂಟ್ವಾಳ ನಗರ ಪೊಲೀಸರು ಈ ಬಗ್ಗೆ ಮುಂದಿನ ತನಿಖೆ ನಡೆಸುತ್ತಿದ್ದಾರೆ..

By suddi9

Leave a Reply

Your email address will not be published. Required fields are marked *