ಬಂಟ್ವಾಳ: ನಿಷೇದಾಜ್ ಉಲ್ಲಂಘಿಸಿ ಶುಕ್ರವಾರ ಬಿಸಿ.ರೋಡಿನಲ್ಲಿ ನಡೆದ ಬ್ರಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ ಬಿಜೆಪಿ ಹಾಗೂ ಸಂಘಪರಿವಾರದ ಮುಖಂಡರು ಸೇರಿದಂತೆ 29 ಮಂದಿಯ ವಿರುದ್ದ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಐಪಿಸಿ ಸೆಕ್ಷನ್ 188,449 ರನ್ವಯ ಪ್ರಕರಣ ದಾಖಲಾಗಿದೆ ಎಂದು ಬಂಟ್ವಾಳ ನಗರ ಪೊಲೀಸರು ತಿಳಿಸಿದ್ದಾರೆ. ಸಂಸದರು,ಶಾಸಕರು,ಪಕ್ಷದ ಮುಖಂಡರು ಹಾಗೂ ಸಂಘ ಪರಿವಾರದ ಪ್ರಮುಖರ ವಿರುದ್ದ ಕೇಸು ದಾಖಲಾಗಿದೆ.
