ವಿಟ್ಲ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮಶತಾಬ್ಧಿ ಅಂಗವಾಗಿ ಸಮರ್ಥ ಭಾರತ ಕೋಟಿವೃಕ್ಷ ಆಂದೋಲನದ ನಿಮಿತ್ತ ವಿಟ್ಲದ ಪಳಿಕೆ ಹಿಂದೂ ರುದ್ರ ಭೂಮಿಯಲ್ಲಿ ವನಮಹೋತ್ಸವ ಆಚರಿಸಲಾಯಿತು. ವಿಟ್ಲ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಜಾನ್ ಡಿ ಸೋಜಾ ರವರು ಗಿಡ ನೆಟ್ಟು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ವಿಟ್ಲ ಪಟ್ಟಣ ಪಂಚಾತ್ ಅಧ್ಯಕ್ಷ ಅರುಣ್ ವಿಟ್ಲ, ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್, ವಿಟ್ಲ ನಗರ ಬಿಜೆಪಿ ಅಧ್ಯಕ್ಷ ಮೋಹನ ದಾಸ್ ಉಕ್ಕುಡ, ಕಾರ್ಯದರ್ಶಿ ಉದಯ ಕುಮಾರ್, ಪಟ್ಟಣ ಪಂಚಾಯತ್ ಸದಸ್ಯರುಗಳಾದ ಚಂದ್ರಕಾಂತಿ ಶೆಟ್ಟಿ, ಶ್ರೀಕೃಷ್ಣ ಹಾಗೂ ಮಂಜುನಾಥ ಕಲ್ಲಕಟ್ಟ, ಮೋಹನ್ ಸೇರಾಜೆ, ಉಷಾ ಕೆ, ವಿಟ್ಲ ಯುವಕ ಮಂಡಲದ ಅಧ್ಯಕ್ಷ ಸದಾನಂದ ಗೌಡ ಸೇರಾಜೆ, ವಿಟ್ಲ ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಜೇಶ್ ಬೊಬ್ಬೆಕ್ಕೇರಿ, ಉಪಾಧ್ಯಕ್ಷ ಶರತ್ ಎನ್ ಎಸ್, ಶಶಿಕಾಂತ ಪ್ರಭು,ರವಿ ಕಟ್ಟೆ ಮತ್ತು ಇತರರು ಭಾಗವಹಿಸಿದರು .

