ಉಡುಪಿ: ಜೇಸಿಐ ವಲಯ 15 ಇದರ ಘಟಕಗಳಾದ ಜೇಸಿಯ ಉಡುಪಿ ಇಂದ್ರಾಳಿ,ಪರ್ಕಳ,ಮಣಿಪಾಲ ಹಿಲ್ ಸಿಟಿ,ಉಡುಪಿ ಸಿಟಿ,ಕಲ್ಯಾಣಪುರ ಕೋಸ್ಮೋ ಸಿಟಿ ಘಟಕಗಳ ಆಶ್ರಯದಲ್ಲಿ ಮೇ.14 ರಂದು ಮಣಿಪಾಲದ ಮಾಧವ ಪೈ ಸ್ಮಾರಕ ಕಾಲೇಜಿನಲ್ಲಿ ಸಂಸದೀಯ ನಡವಳಿಕೆ ಮತ್ತು ಅದ್ಯಕ್ಷರ ಕರ್ತವ್ಯ ಬಗ್ಗೆ ತರಬೇತಿ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮವನ್ನು ವಲಯ ಉಪಾದ್ಯಕ್ಷ ಮರಿಯಪ್ಪ ಉದ್ಘಾಟಿಸಿ ಶುಭ ಹಾರೈಸಿದರು.ವೇದಿಕೆಯಲ್ಲಿ ತರಬೇತುದಾರ ರಾಜೇಶ್ ಶೆಣೈ ಪರ್ಕಳ,ಮಣಿಪಾಲ ವಿ.ವಿಯ ಅಧಿಕಾರಿ ಬಾಲಕೃಷ್ಣ ಪ್ರಭು,ವಲಯ ಅಧಿಕಾರಿಗಳಾದ ರಾಘವೇಂದ್ರ ಪ್ರಭು ಕರ್ವಾಲು,ರತ್ನಾಕರ ಇಂದ್ರಾಳಿ,ಪ್ರಕಾಶ್ ಭಟ್,ವಿವಿದ ಘಟಕಗಳ ಅದ್ಯಕ್ಷರುಗಳಾದ ಸುಬಾಷ್ ಬಂಗೇರ,ಕರುಣಾಕರ ಬಂಗೇರ,ಶೆರ್ಲಿ ಮನೋಜ್,ಆಶಾ ಬಿ,ರಿತೇಶ್ ಕುಮಾರ್,ಮುಂತಾದವರಿದ್ದರು.
