ಉಡುಪಿ: ಕರ್ನಾಟಕ ರಾಜ್ಯ sಸಾಂಸ್ಕೃತಿಕ ಅಕಾಡೆಮಿ ಮತ್ತು ರಾಜ್ ಮಿಡಿಯಾ ಬೆಂಗಳೂರು ಇದರ ವತಿಯಿಂದ ಎ.16 ರಂದು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎನ್ ಜಿಒ ಸಭಾ ಭವನದಲ್ಲಿ ನಡೆದ ಸಮಾರಂಭದಲ್ಲಿ ಜೇಸಿಐ ಉಡುಪಿ ಸಿಟಿ ಇದರ ನಿಕಟ ಪೂರ್ವ ಅದ್ಯಕ್ಷ,ವ್ಯಕ್ತಿತ್ವ ವಿಕಸನ ತರಬೇತುದಾರ ರಾಘವೇಂದ್ರ ಪ್ರಭು,ಕರ್ವಾಲು ರವರಿಗೆ ತಮ್ಮ ಸಮಾಜಿಕ ಚಟುವಟಿಕೆಗಳಿಗೆ ಕೊಡಮಾಡುವ ಸಮಾಜ ರತ್ನ ಪ್ರಶಸ್ತಿಯನ್ನು ಮಾಜಿ ಕೇಂದ್ರ ಸಚಿವ ರಾಜಶೇಖರನ್ ರವರು ಫ್ರಧಾನ ಮಾಡಿದರು.ಈ ಸಮಾರಂಭದಲ್ಲಿ ಬೆಂಗಳೂರಿನ ಕೋಳದ ಮಠದ ಶಾಂತವೀರ ಸ್ವಾಮೀಜಿ,ನಟರಾದ ಬ್ಯಾಂಕ್ ಜನಾರ್ಧನ್ ನಟಿ ಶೃತಿ ಮುಂತಾದವರು ಭಾಗವಹಿಸಿದ್ದರು.
