ಉಡುಪಿ: ಜೇಸಿಐ ವಲಯ 15 ಇದರ ವಿಶೇಷ ವಲಯಾಡಳಿತ ಮಂಡಳಿ ಸಭೆಯು ಎ.23 ರಂದು ಸುರತ್ಕಲ್ ಗೋವಿಂದದಾಸ ಕಾಲೇಜಿನಲ್ಲಿ ನಡೆಯಿತು.ಸಭೆಯಲ್ಲಿ ಜೇಸಿಐ ಭಾರತದ ರಾಷ್ಟೀಯ ಅದ್ಯಕ್ಷರಾದ ರಾಮ್ಕುಮಾರ್ ಮೆನನ್ ಭಾಗವಹಿಸಿದ್ದರು.ಅದ್ಯಕ್ಷತೆಯನ್ನು ವಲಯಾದ್ಯಕ್ಷ ಸಂತೋಷ್ ಜಿ ವಹಿಸಿದ್ದರು.ಜೇಸಿಐ ಮುಂಡ್ಕೂರು ಘಟಕದ ಆತಿಥ್ಯದಲ್ಲಿ ನಡೆದ ಈ ಸಭೆಯಲ್ಲಿ ವಲಯಾಧಿಕಾರಿಗಳು ಭಾಗವಹಿಸಿದ್ದರು.

