ಉಡುಪಿ:- ವ್ಯಕ್ತಿತ್ವ ವಿಕಸನ ತರಬೇತುದಾರ ಯುವ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭು ಕರ್ವಾಲು ರವರಿಗೆ ಯುವ ಸಮಾಜಿಕ ಚಟುವಟಿಕೆಗಳಿಗೆ ಕರ್ನಾಟಕ ಸಾಂಸ್ಕ್ರತಿಕ ಅಕಾಡೆಮಿ ವತಿಯಿಂದ ನೀಡಲಾಗುವ ಬಸವಸೇವಾ ಶ್ರೀ ಪ್ರಶಸ್ತಿಯನ್ನು ಮಾ.5 ರಂದು ಬೆಂಗಳೂರಿನ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ನಯನ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.

ಸಮಾರಂಭದಲ್ಲಿ ಬೇಲಿ ಮಠದ ಶ್ರೀ ಶಿವರುದ್ರ ಸ್ವಾಮೀಜಿ,ಮಾಜಿ ಕೇಂದ್ರ ಸಚಿವ ಎಂ ರಾಜಶೇಖರನ್,ಮಾಜಿ ಸಚಿವ ಎಂ.ಪಿ ನಾಡಗೌಡ,ವಿಶ್ರಾಂತ ಉಚ್ಚ ನ್ಯಾಯಾಲಯದ ನ್ಯಾಯಾಧಿಶ ಅರಳಿ ನಾಗರಾಜ,ಚಲನಚಿತ್ರ ನಟಿ ಶೃತಿ,ಜಹಿರುದ್ದಿನ್,ಡಾ|| ರಾಜು ಮುಂತಾದವರು ಭಾಗವಹಿಸಿದ್ದರು.
