ಬಂಟ್ವಾಳ: ಕಡೂರು ರಾಷ್ಟ್ರೀಯ ಹೆದ್ದಾರಿ ನಡುವಿನ ಪುಂಜಾಲಕಟ್ಟೆ ಸೇತುವೆ ಅಡಿ ಕಸ ಮತ್ತು ಕೊಳೆತ ತರಕಾರಿ ಸಹಿತ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ರಾಶಿ ದುರ್ನಾತ ಬೀರುತ್ತಿದೆ. ಸೇತುವೆ ಮೇಲ್ಭಾಗದಲ್ಲಿ ‘ ಇಲ್ಲಿ ಕಸ ತ್ಯಾಜ್ಯ ಎಸೆಯಬೇಡಿ, ಪರಿಸರ ಶುಚಿಯಾಗಿಡಲು ಸಹಕರಿಸಿ’ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ನಾಮಪಳಕ ಅಳವಡಿಸಿದೆ. ಇನ್ನೊಂದೆಡೆ ಮದುವೆ ಸಭಾಂಗಣ ಮತ್ತು ಮಾರುಕಟ್ಟೆಯೂ ಇಲ್ಲಿರುವುದು ತ್ಯಾಜ್ಯ ಹೆಚ್ಚಳಕ್ಕೆ ಕಾರಣ ಎಂಬ ಆರೋಪ ಸ್ಥಳೀಯರಿಂದ ವ್ಯಕ್ತವಾಗಿದೆ.

