ಕೈಕಂಬ: ಗಂಜಿಮಠದಲ್ಲಿ ಬೈಕ್ನಲ್ಲಿ ಸಾಗುತ್ತಿದ್ದ ಯುವಕನೊಬ್ಬನಿಗೆ ಟಿಪ್ಪರ್ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ನಡೆದಿದೆ.

ಶಿರ್ತಾಡಿ ನಿವಾಸಿ ಸಂತೋಷ್ ರಾಮಣ್ಣ ಪೂಜಾರಿ(25) ಮೃತಪಟ್ಟ ಯುವಕ. ಇವರು ಬೈಕ್ನಲ್ಲಿ ಮೂಡುಬಿದಿರೆಯಿಂದ ಕೈಕಂಬ ಕಡೆಗೆ ಸಾಗುತ್ತಿದ್ದು, ಎದುರುಗಡೆಯಿಂದ ಬಂದ ಟಿಪ್ಪರ್ ಡಿಕ್ಕಿಯಾಗಿದೆ. ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

