ಪೆರ್ಮಂಕಿ: ಶ್ರೀ ಸದಾಶಿವ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯದ ಕುರಿತು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಧರ್ಮಾಧಿಕಾರಿಗಳು ನೀಡಿದ 3 ಲಕ್ಷ ರೂ. ದೇಣಿಗೆಯನ್ನು ಶ್ರೀ. ಕ್ಷೇ. ಧ.ಗ್ರಾ. ಯೋಜನೆಯ ಯೋಜನಾಧಿಕಾರಿ ಉಮರಬ್ಬ ಹಾಗೂ ಮೇಲ್ವಿಚಾರಕ ಕೃಷ್ಣಪ್ಪ ಅವರು ಡಿ.9ರಂದು ಹಸ್ತಾಂತರಿಸಿದರು.

permanki

ಈ ಸಂದರ್ಭದಲ್ಲಿ ಕೇತ್ರದ ಆಡಳಿತ ಮೋಕ್ತೇಸರಾದ ಲೋಕೇಶ್ ಮಾಡ, ಉಮಾನಾಥ ಬೆಳ್ಚಡ, ಪ್ರಮುಖರಾದ ಸುದರ್ಶನ ಶೆಟ್ಟಿ, ಗುಣಕರ ಸಾಲ್ಯಾನ್, ಯೋಜನೆಯ ಪೆರ್ಮಂಕಿ ಒಕ್ಕೂಟದ ಅಧ್ಯಕ್ಷೆ ರತ್ನಾ, ಸೇವಾ ಪ್ರತಿನಿಧಿ ರೋಶನಿ, ಮಾಜಿ ಅಧ್ಯಕ್ಷ ಶ್ರೀಧರ ಬೇಟೆಮಾರು, ಹರೀಶ್ ಕೊಲಂಬೆ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *