ಧರ್ಮಸ್ಥಳ: ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಂಬತ್ತಳ್ಳಿಯ ಅಯ್ಯಪ್ಲರ್ ಸಿದ್ಧಲಿಂಗಪ್ಪ ಅವರ ಧರ್ಮಪತ್ನಿ ಬೆಣ್ಣೆ ಕಲ್ಲಮ್ಮ ಅವರು ಶ್ರೀ ಕ್ಷೇತ್ರದಲ್ಲಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ಬಳಿಕ ಪೂಜ್ಯ ಶ್ರೀ ಡಿ, ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾದರು. 111 ವರ್ಷದ ಬೆಣ್ಣೆ ಕಲ್ಲಮ್ಮನವರು ಮರಿಮೊಮ್ಮಕ್ಕಳು, ಗಿರಿ ಮೊಮ್ಮಕ್ಕಳು ಅಂದರೆ 5 ತಲೆಮಾರು ಕಂಡಿದ್ದಾರೆ. ಅವರನ್ನು ಶ್ರೀ ಹೆಗ್ಗಡೆಯವರು ಗೌರವಿಸಿದರು.

