ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಜಿನಶ್ರೀ ಡಿಜಿಟಲ್ ಸಂಸ್ಥೆ ವತಿಯಿಂದ ಈಚೆಗೆ ನಡೆದ 15ನೇ ವರ್ಷಾಚರಣೆ ಕಾರ್ಯಕ್ರಮವನ್ನು ಮೂಡುಬಿದ್ರೆ ಜೈನಮಠ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಉದ್ಘಾಟಿಸಿದರು. ಪೂಂಜ ಕ್ಷೇತ್ರದ ಅಸ್ರಣ್ಣ ಕೃಷ್ಣಪ್ರಸಾದ್ ಆಚಾರ್ಯ, ನಿವೃತ್ತ ಮುಖ್ಯಶಿಕ್ಷಕ ವಿನಯ ಕುಮಾರ್ ಜೈನ್, ಅಬ್ದುಲ್ ರಹಿಮಾನ್ ಸಖಾಫಿ, ರೊನಾಲ್ಡ್ ಮೊರಾಸ್, ಚಂದ್ರಹಾಸ ಶೆಟ್ಟಿಗಾರ್, ಸಂದೇಶ ಶೆಟ್ಟಿ ಪೊಡುಂಬ, ಸಂಸ್ಥೆ ಮುಖ್ಯಸ್ಥ ಸುಧೀಂದ್ರ ಜೈನ್ ಮತ್ತಿತರರು ಇದ್ದರು.

