ಸಾಂಸ್ಕ್ರತಿಕ ಮೌಲ್ಯಗಳನ್ನು ಎತ್ತಿ ಹಿಡಿದು ಕಲಾವಿದರನ್ನು ಗೌರವಿಸುವುದು ಹಾಗೂ ಉದಯೋಣ್ಮುಖ ಕಲಾವಿದರನ್ನು ಪ್ರೋತ್ಸಾಹಿಸುವುದು ಅತ್ಯಂತ ಉತ್ತಮ ಕಾರ್ಯ. ಇತ್ತೀಚಿನ ದಿನಗಳಲ್ಲಿ ಒತ್ತಡದ ಮದ್ಯೆ ಬದುಕುವ ಮಂದಿಗೆ ನಗುವುದಕ್ಕೆ ಸಮಯವೇ ಸಿಗುವುದಿಲ್ಲ. ಇವೆಲ್ಲವುಗಳ ಮದ್ಯೆ ಬಲೆ ತೆಲಿಪಾಲೆ ಮಾತ್ರ ವಿಶ್ವದ ಜನರನ್ನು ತನ್ನೆಡೆಗೆ ಸೆಳೆಯಲು ಸಪಲವಾಗರುವುದು ಸಂತಸದ ವಿಚಾರಎಂದು ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ ಮಿಜಾರು ಅಣ್ಣಪ್ಪ ಹೇಳಿದರು .

ಅವರು ಶಾಸ್ತವು ಶ್ರೀ ಭೂತನಾಥೇಶ್ವರ ದೇವಳದ ಆಶ್ರಯದಲ್ಲಿ ನಮ್ಮ ಟೀವಿ ವಾಹಿನಿಯ ಸಹಭಾಗಿತ್ವದಲ್ಲಿ ಜರಗಿದ ಬಲೆ ತೆಲಿಪಾಲೆ ಹಾಸ್ಯ ಸರಣಿಯ ಪೈನಲ್ಸ್ ಸಂದರ್ಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಹರೆಕಳ ಹಾಜಬ್ಬ ಅವರನ್ನು ಕೂಡ ಸನ್ಮಾನಿಸಿ ಗೌರವಿಸಲಾಯಿತು .
ಸನ್ಮಾನವು ತಲಾ ರೂ 50,000 ನಗದು , ಸ್ಮರಣಿಕೆ ಒಳಗೊಂಡಿತ್ತು ಪಾಂಡೇಶ್ವರ ಪೊಲೀಸ್ ಇನ್ಸ್ಪಕ್ತರ್ ದಿನಕರ ಶೆಟ್ಟಿ , ಸಂಗೀತ ನಿದರ್ೇಶಕ ಗುರುಕಿರಣ್ ಅವರು ಸನ್ಮಾನವನ್ನು ನೆರವೇರಿಸಿದರು. ದೇವಳದ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿ,ಹರಿಣಾಕ್ಷಿ ವಿ.ಶೆಟ್ಟಿ , ನಯನಾ ವಿ. ಶೆಟ್ಟಿ, ನಮ್ಮ ಟಿವಿ ಮುಖ್ಯಸ್ಥ ಡಾ. ಶಿವಶರಣ್ ಶೆಟ್ಟಿ ನಿರೂಪಕ ನವೀನ್ ಶೆಟ್ಟಿ ಉಪಸ್ಥಿತರಿದ್ದರು.






