ಕೈಕಂಬ: ರಾಷ್ಟ್ರೀಯ ಆಯುರ್ವೇದ ದಿನಾಚರಣಾ ಅಂಗವಾಗಿ ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆ ವತಿಯಿಂದ “ಉಚಿತ ಮಧುಮೇಹ ತಪಸಣಾ ಶಿಬಿರ ಮತ್ತು ಮಾಹಿತಿ ಶಿಬಿರ” ಕಾರ್ಯಕ್ರಮವು ಗಂಜೀಮಠ ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆಯಲ್ಲಿ ಅ.28 ಶುಕ್ರವಾರದಂದು ಜರಗಲಿದೆ.
ನಾರ್ಲಪದವಿನ ಹಿರಿಯ ಅರ್ಚಕರಾದ ಶ್ರೀಪತಿ ಭಟ್ ಶಿಬಿರವನ್ನು ಉದ್ಗಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಾರ್ತಾ.ಕಾಮ್ ಪ್ರಧಾನ ಸಂಪಾದಕ ಹರೀಶ್ ಅದ್ದೂರು, ಗಂಜಿಮಠ ಗ್ರಾ.ಪಂ ಅಧ್ಯಕ್ಷೆ ಮಾಲತಿ, ಗಂಜಿಮಠ ತಾ.ಪಂ.ಸದಸ್ಯ ಸುನೀಲ್ ಉಪಸ್ಥಿರಿರುವರು.
ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1ರವರೆಗೆ ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆ ಆಯೋಜಿಸುವ “ಮಧುಮೇಹ ಮುಕ್ತ ಭಾರತ ಜನ ಜಾಗೃತಿ ಅಭಿಯಾನ” ಜರುಗಲಿದೆ.

