ಬೆಳ್ತಂಗಡಿ: ಇಂಡಿಯಾ ಟುಡೆ ಪತ್ರಿಕಾ ಬಳಗದವರು ನೀಡುತ್ತಿರುವ ಪ್ರಥಮ ರಾಷ್ಟ್ರೀಯ ” ಸಫಾಯಿಗಿರಿ” ಪ್ರಶಸ್ತಿಯನ್ನು ಧರ್ಮಸ್ಥಳಕ್ಕೆ ನೀಡಲಾಗಿದೆ.
ಇಂಡಿಯಾ ಟುಡೆ ಇಂಗ್ಲಿಷ್ ಪತ್ರಿಕಾ ಬಳಗ ರಾಷ್ಟ್ರಾದ್ಯಂತ ಸ್ವಚ್ಛತೆಯನ್ನು ಕೈಗೊಂಡ ವಿವಿಧ ನಗರಗಳನ್ನು ವರ್ಗೀಕರಿಸಿ ಮಾಡಿದ ಸರ್ವೇಕ್ಷಣೆಯಲ್ಲಿ ರಾಷ್ಟ್ರದ ಧಾರ್ಮಿಕ ನಗರಗಳ ಪೈಕಿ ಧರ್ಮಸ್ಥಳವನ್ನು ಅತ್ಯಂತ ” ಸ್ವಚ್ಛ ಧಾರ್ಮಿಕ ನಗರ”ವೆಂದು ಗುರುತಿಸಿ ಪ್ರಶಸ್ತಿ ನೀಡಲಾಯಿತು.


