ಸಿದ್ಧಕಟ್ಟೆ: ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ರೋಟರಿ ಸಮುದಾಯ ದಳ ವತಿಯಿಂದ ಭಾನುವಾರ ನಡೆದ ವಾರ್ಷಿಕ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಮಾನಂದ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಭಾಕರಪ್ರಭು ಇವರನ್ನು ಸನ್ಮಾನಿಸಲಾಯಿತು.
ರೋಟರಿ ಅಧ್ಯಕ್ಷ ಡಾ.ಕೃಷ್ಣಮೂರ್ತಿ ಭಟ್, ಎ.ರಾಮಣ್ಣ ರೈ, ಮಹಮ್ಮದ್ ಶರೀಫ್, ಶ್ರೀಧರ್ ಭಟ್, ಮೈಕೆಲ್ ಡಿಕೋಸ್ತ, ಡಾ.ಸುದೀಪ್ ಜೈನ್, ಡಾ.ಯೋಗೀಶ ಕೈರೋಡಿ, ಜೆರಾಲ್ಡ್ ಡಿಕೋಸ್ತ, ವಾಸುದೇವ ಆಚಾರ್ಯ, ವಿನಯಚಂದ್ರ ಮತ್ತಿತರರು ಇದ್ದರು.

