ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ನವರಾತ್ರಿ ಮಹೋತ್ಸವಕ್ಕೆ ಶನಿವಾರ ಚಾಲನೆ ನೀಡಲಾಯಿತು. ದೇವಳದ ಪ್ರದಾನ ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್, ಪರಮೇಶ್ವವರ ಭಟ್, ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಹಾಗೂ ಯಕ್ಷ ಕಲಾ ಪೊಳಲಿ ಇದರ ಸಂಚಾಲಕ ವೆಂಕಟೇಶ್ ನಾವಡ, ಸುಬ್ರಾಯ ಕಾರಂತ ಮತ್ತಿತರರು ಇದ್ದರು.
ನಂತರ ಪೊಳಲಿ ಯಕ್ಷೋತ್ಸವ ಇದರ ವತಿಯಿಂದ ” ಯಕ್ಷ- ಗಾನ- ಪಂಚಾಮೃತ” ಗಾನ ವೈಭವ ಜರಗಿತು. ಎಳು ಮಂದಿ ಕಲಾವಿದರನ್ನು ಸನ್ಮಾನಿಸಲಾಯಿತು. ನಂತರ ಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ “ಯಕ್ಷಗಾನ ಬಯಲಾಟ” ಕಲ್ಯಾಣೋತ್ಸವ” ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ರಾಜಾಂಗಣದಲ್ಲಿ ಜರಗಿತು.




