ಬಂಟ್ವಾಳ : ಹಿಂದುಗಳ ಶ್ರದ್ಧೆಯ ನಂಬಿಕೆಯ ಹಬ್ಬವಾದ ನವರಾತ್ರಿಯ ಸಂದರ್ಭ ಧಾರ್ಮಿಕ ಆಚರಣೆಗಳಿಗೆ ಪೂರಕವಾದ ಮಕ್ಕಳ ಮಧ್ಯಾಂತರ ರಜೆಯನ್ನು ಶಿಕ್ಷಣ ಇಲಾಖೆಗಳು ಕಡಿತಗೊಳಿಸಿರುವುದನ್ನು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳ ಬಂಟ್ವಾಳ ಪ್ರಖಂಡ ಖಂಡಿಸುತ್ತದೆ ಮತ್ತು ಪ್ರತಿವರ್ಷದಂತೆ ರಜೆ ನೀಡಬೇಕೆಂದು ಒತ್ತಾಯಿಸಿ ಬಂಟ್ವಾಳ ಶಿಕ್ಷಣಾಧಿಕಾರಿಗೆ ಮನವಿ ನೀಡಲಾಯಿತು. ಹೊರಡಿಸಿರುವ ಆದೇಶವನ್ನು ಹಿಂಪಡೆದು ಹೊಸ ಆದೇಶ ಮಾಡಬೇಕು, ಹಿಂದುಗಳ ಧಾರ್ಮಿಕ ಭಾವನೆಗಳಿಗಜೆ ಬೆಲೆ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂದರ್ಭ ವಿ.ಹಿಂ.ಪ ಜಿಲ್ಲಾ ವಿಶೇಷ ಪ್ರಮುಖ್ ಸರಪಾಡಿ ಅಶೋಕ ಶೆಟ್ಟಿ, ಜಿ. ಭಜರಂಗ ದಳ ಪ್ರಮುಖ್ ಗುರುರಾಜ್ ಬಂಟ್ವಾಳ, ಭರತ್ ಕುಮ್ಡೇಲು, ವಿ.ಹಿಂ.ಪ ಬಂಟ್ವಾಳ ಪ್ರಖಂಡ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಸಂಯೋಜಕ ಪ್ರದೀಪ್ ಅಜ್ಜಿಬೆಟ್ಟು, ಪ್ರಮುಖರಾದ ದಕ್ಷಣ್ ಮಿತ್ತಮಜಲು, ಭುವಿತ್ ಶೆಟ್ಟಿ, ಯಾಧವ ನೀರಪಾದೆ, ಮನೋಜ್ ನೀರಪಾದೆ, ಜಿತೇಂದ್ರ ಅಜ್ಜಿಬೆಟ್ಟು, ಮಹೇಶ್ ಕೋಡಿಬೆಟ್ಟು ಉಪಸ್ಥಿತರಿದ್ದರು.

