ಕೈಕಂಬ:ಶ್ರೀ ಕಾವೇಶ್ವರ ಭಕ್ತವೃಂಧ ಬಟ್ಟಾಜೆ ಇದರ ಆಶ್ರಯದಲ್ಲಿ 10ನೇ ವರ್ಷದ ಮೊಸರುಕುಡಿಕೆ ಉತ್ಸವವು ಅ.25ಗುರುವಾರ ನಡೆಯಲಿದೆ. ಮೊಸರು ಕುಡಿಕೆಯ ಉದ್ಘಾಟನೆಯನ್ನು ಪ್ರಸನ್ನ ಭಂಡಾರಿ ಬಳ್ಳಿಮನೆ, ಸಚೀಂದ್ರನಾಥ ಭಂಡಾರಿ ಕಿರಳೆಗುತ್ತು, ಅಮ್ಟಾಡಿ ಗ್ರಾಮ ಪಂಚಾಯತ್ ಸದಸ್ಯರು ಸುಧಾಕರ ಶೆಟ್ಟಿ ಮಾಡಲಿರುವರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾವೇಶ್ವರ ಭಕ್ತವೃಂಧ ಇದರ ಗೌರವಾಧ್ಯಕ್ಷರು ಕೃಷ್ಣಪ್ಪ ಪೂಜಾರಿ ಕುಕ್ಕಾಜೆ, ಆಳ್ವಾಸ್ ಕಾಲೇಜು ಉಪನ್ಯಾಸಕರು ಯೋಗೀಶ್ ಕೈರೋಡಿ, ಶೀನ ಕುಶಲ ಪಂಜಿಮೊಗರು, ಸತೀಶ್ ಗಾಂಭೀರ್ ಶ್ರೀ ವ್ಯಾಘ್ರನಿಲಯ ಕಾಗುಡ್ಡೆ, ಪ್ರಕಾಶ್ ಆಳ್ವ ಗುಂಡಾಲ ವಹಿಸಲಿರುವರು, ಸಂಜೆ 7ರಿಂದ ಶ್ರೀ ಗುರು ನೃತ್ಯ ತಂಡ ಬಂಟ್ವಾಳ ಇವರಿಂದ ಭರತನಾಟ್ಯ ಹಾಗೂ 7.30ರಿಂದ ಸದ್ಗುರು ಕಲಾತಂಡ ಬಟ್ಟಾಜೆ ಇವರಿಂದ ನಾಟಕ ಪುದರ್ ದೀಪರ ನಡೆಯಲಿದೆ.

