ಬೆಂಗಳೂರು: ಬೆಂಗಳೂರು-ಧಾರವಾಡ ಇಂಟರ್ ಸಿಟಿ ರೈಲಿಗೆ ಬಾಂಬ್ ಇಡಲಾಗಿದೆ ಎಂಬ ಕರೆಯೊಂದು ರೈಲ್ವೆ ಅಧಿಕಾರಿಗಳಿಗೆ ಬಂಧಿದ್ದು ಕಟ್ಟೆಚ್ಚರ ವಹಿಸಲಾಗಿದೆ. ಈಗಾಗಲೇ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕಾಗಿಮಿಸಿದ್ದು ವ್ಯಾಪಕ ಪರಿಶೀಲನೆಯಲ್ಲಿ ತೊಡಗಿದೆ. ಶ್ವಾನದಳದ ಸಹಕಾರದಿಂದ ಆಯಕಟ್ಟಿನ ಸ್ಥಳದಲ್ಲಿ ಬಾಂಬ್ ಪತ್ತೆಗೆ ತೊಡಗಿದ್ದು ಇದುವರೆಗೂ ಯಾವುದೇ ಪೂರಕ ಮಾಹಿತಿ ಸಿಕ್ಕಿಲ್ಲ.
ಇದು ಕಿಡಿಗೇಡಿಗಳ ಹುಸಿಕರೆ ಇರಬಹುದೋ ಎಂಬ ಸಂಶಯ ವ್ಯಕ್ತವಾಗಿದ್ದು ವಿಚಾರಣೆ ನಡೆದ ಬಳಿಕವಷ್ಟೇ ಸತ್ಯಾಂಶ ಹೊರಬೀಳಲಿದೆ.
