ಕೈಕಂಬ:ಗುರುಪುರ ರಸ್ತೆಯಲ್ಲಿ ವಿದ್ಯುತ್ ಲೈನ್ಗೆ ಬಸ್ಸು ತಾಗಿದ ಘಟನೆ ಗುರುಪುರದ ಸೇವಾ ಸಹಕಾರಿ ಬ್ಯಾಂಕ್ ಸಮೀಪ ಭಾನುವಾರ ಮುಂಜಾನೆ ನಡೆದಿದೆ . ಮಂಗಳೂರಿನಿಂದ ಮೂಡಬಿದ್ರೆಗೆ ಹಾದು ಹೋಗುವ ಗುರುಪುರದಲ್ಲಿ ಬಸ್ಸಿನ ಮೇಲ್ಬಾಗದಲ್ಲಿ ದೊಡ್ಡ ಲಗೇಜು ಇದ್ದ ಕಾರಣ ವಿದ್ಯುತ್ ಲೈನ್ಗೆ ತಾಗಿ ವಿದ್ಯುತ್ ವಯರ್ ತುಂಡಾಗಿ ಬಿದ್ದಿದೆ ಸ್ಥಳೀಯರ ಸಮಯಪ್ರಜ್ಙೆ ಯಿಂದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಮುಂಜಾನೆಯ ಸಮಯದಲ್ಲಿ ಹೆಚ್ಚಿನ ಜನರು ವಾಹನಗಳ ಓಡಾಟ ಕಡಿಮೆ ಇದ್ದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ವಿದ್ಯುತ್ ವಯರ್ ಕಡಿದು ಮಾರ್ಗದಲ್ಲಿ ಬಿದ್ದು ಕರೆಂಟ್ ಹರಿಯುತ್ತಿತ್ತು ಅದನ್ನು ಕಂಡು ಸ್ಥಳೀಯರು ಸೇರಿ ಲೈನ್ ಆಪ್ ಮಾಡಿ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.


