ಅಮ್ಮುಂಜೆ: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಮಂಡೆಬೆಟ್ಟು ಮುಯ್ಯದ್ದೀನ್ ಜುಮ್ಮಾಮಸೀದಿಯಿಂದ ಹಾದುಹೋಗುವ ಹೊಳೆಬದಿ ರಸ್ತೆಗೆ  ಗುರುವಾರ ಅರಣ್ಯ ಸಚಿವ ರಮಾನಾಥ ರೈ ಅವರು ಶಿಲಾನ್ಯಾಸ ನೆರವೇರಿಸಿದರು.

c 8

c 5

c 6

c 7
ರಾಜ್ಯ ಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಮಂಜುರಾದ  9,80 ಲಕ್ಷದ ರಸ್ತೆ ಕಾಮಗಾರಿಗೆ  ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಬಂಟ್ವಾಳ ತಾ.ಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಜಿಲ್ಲಾ ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಅಮ್ಮುಂಜೆ ಗ್ರಾಮ ಪಂ. ಅಧ್ಯಕ್ಷೆ  ಪ್ರೇಮಲತಾ, ತಾ.ಪಂ ಸದಸ್ಯ ಶಿವಪ್ರಶಾದ್ , ಪಂ.ಸದಸ್ಯರಾದ  ಚಂದ್ರಶೇಖರ ಭಂಡಾರಿ,  ರಝಾಕ್ , ಹರೀಶ್  ಸ್ಥಳೀಯರಾದ ರಂಗನಾಥ ಶೆಟ್ಟಿ, ಇಂಜಿನಿಯರ್ ಗಳಾದ ಕೃಷ್ಣ ,  ಖಾದರ್, ಕಾರ್ಯನಿರ್ವಾಣಾಧಿಕಾರಿ ಮಿರಾಂದ , ಗುತ್ತಿಗೆದಾರ ಅಬೂಬಕ್ಕರ್ ಅಮ್ಮುಂಜೆ ಮತ್ತಿತರರು ಉಪಸ್ಥಿತರಿದ್ದರು .

 

By suddi9

Leave a Reply

Your email address will not be published. Required fields are marked *