ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯದಲ್ಲಿ ವಾಮದಪದವು ಸಮುದಾಯ ಆರೋಗ್ಯ ಕೇಂದ್ರ ವತಿಯಿಂದ ಸೊಳ್ಳೆ ನಿಯಂತ್ರಣಕ್ಕಾಗಿ ಸೋಮವಾರ ಫಾಗಿಂಗ್ ನಡೆಸಲಾಯಿತು. ಕುಕ್ಕಿಪಾಡಿ ಗ್ರಾ.ಪಂ.ಅಧ್ಯಕ್ಷ ದಿನೇಶ ಸುಂದರ ಶಾಂತಿ, ಪುಂಜಾಲಕಟ್ಟೆ ಆರೋಗ್ಯ ಸಹಾಯಕ ಅನ್ವರ್ ಹುಸೇನ್, ಹಿರಿಯ ಆರೋಗ್ಯ ಸಹಾಯಕಿ ಶಶಿಕಲಾ, ಭಾರತಿ ಎಂ., ರಸಿಕ, ಮಾಧವ ಬಂಗೇರ ಮತ್ತಿತರರು ಇದ್ದರು. 
