ಬಂಟ್ವಾಳ ತಾಲ್ಲೂಕಿನ ಅಮ್ಮೆಮಾರ್ ಎಂಬಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ವತಿಯಿಂದ ರೂ 1.5 ಲಕ್ಷ ವೆಚ್ಚದಲ್ಲಿ ನಿರ್ಮಾನಗೊಳ್ಳಲಿರುವ ಚರಂಡಿಗೆ ಮೋರಿ ಅಳವಡಿಸುವ ಕಾಮಗಾರಿಗೆ ಪಕ್ಷದ ಜಿಲ್ಲಾಧ್ಯಕ್ಷ ಹನೀಫ್ಕಾನ್ ಕೊಡಾಜೆ ಭಾನುವಾರ ಚಾಲನೆ ನೀಡಿದರು. ಮಸೀದಿ ಮುದರ್ರಿಸ್ ಮುಸ್ತಫಾ ಯಮಾನಿ, ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಪಂಚಾಯಿತಿ ಸದಸ್ಯ ಸುಲೈಮಾನ್ ಉಸ್ತಾದ್, ಮಾಜಿ ಸದಸ್ಯ ಇಕ್ಬಾಲ್, ಸದಸ್ಯ ಝಹೂರ್ ಅಹ್ಮದ್, ಮಸೀದಿ ಕಾರ್ಯದರ್ಶಿ ಅಬೂಸಾಲಿ ಉಸ್ತಾದ್, ಖಾದರ್ ಮತ್ತಿತರರು ಇದ್ದರು.

