ಸುರತ್ಕಲ್: ಫೇಸ್ ಬುಕ್‌ನಲ್ಲಿ ಪರಿಚಯವಾದ ಯುವತಿಯನ್ನು ಮದುವೆ ಯಾಗಲು ಬಯಸಿ, ನಿರಾಕರಣೆಗೆ ಒಳಗಾದ ಯುವಕನೊಬ್ಬ ಯುವತಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಸುರತ್ಕಲ್‌ನ ಮಧ್ಯದಲ್ಲಿ ಸಂಭವಿಸಿದೆ. ಕುಂದಾಪುರ ಹೆಮ್ಮಾಡಿಯ ಸುಧೀಂದ್ರ ಎಸ್. ದೇವಾಡಿಗ (35) ಮೃತರು.

facebook

ಮುಂಬಯಿಯಲ್ಲಿ ಕ್ಯಾಟರಿಂಗ್ ಒಂದರಲ್ಲಿ ಮ್ಯಾನೇಜರ್ ಆಗಿದ್ದ ಸುಧೀಂದ್ರ ಅವರಿಗೆ ಫೇಸ್ ಬುಕ್‌ನಲ್ಲಿ ಸುರತ್ಕಲ್ ಮಧ್ಯದ ಖಡ್ಗೇಶ್ವರಿ ದೇವಸ್ಥಾನದ ಬಳಿಯ ಯುವತಿಯೊಬ್ಬರು ಪರಿಚಯವಾಗಿದ್ದರು. ಪರಿಚಯ ಸ್ನೇಹವಾಗಿ, ಬಳಿಕ ಪ್ರೀತಿಯಾಗಿತ್ತು. ಆದರೆ, ಇದೊಂದು ಏಕಮುಖ ಪ್ರೇಮ ಎಂದು ಹೇಳಲಾಗಿದೆ. ಇತ್ತೀಚೆಗೆ ನಡೆದ ಯುವತಿಯ ಅಕ್ಕನ ಮದುವೆಗೆ ಸುಧೀಂದ್ರ ಆಗಮಿಸಿದ್ದರು. ಬಳಿಕ ಯುವತಿಯ ಜತೆ ಮದುವೆ ಪ್ರಸ್ತಾಪವಿಟ್ಟಿದ್ದು, ಮನೆಯವರು ನಿರಾಕರಿಸಿದ್ದರು ಎನ್ನಲಾಗಿದೆ. ಆದರೆ, ಯುವತಿ ಜತೆ ನಿರಂತರವಾಗಿ ಫೋನ್ ಸಂಪರ್ಕ ಇಟ್ಟುಕೊಂಡಿದ್ದ ಸುಧೀಂದ್ರ ಭಾನುವಾರ ಮಧ್ಯದ ಮನೆಗೆ ಬಂದಿದ್ದರು. ಆದರೆ, ಆ ಹೊತ್ತಿಗೆ ಯುವತಿ ದೇವಸ್ಥಾನಕ್ಕೆ ಹೋಗಿದ್ದರು. ಮನೆಯವರು ಸಾಗಹಾಕಿದರೂ ಹಿಂದಿನ ಬಾಗಿಲಿನಿಂದ ಒಳಪ್ರವೇಶಿಸಿ ಬೆಡ್ ರೂಂ ಪ್ರವೇಶಿಸಿದ ಸುಧೀಂದ್ರ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ಸುರತ್ಕಲ್ ಠಾಣೆಯಲ್ಲಿ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *