ಉಳ್ಳಾಲ: ಕಳವುಗೈದ ಗೋವನ್ನು ಅಮಾನುಷವಾಗಿ ಸಾಗಿಸುತ್ತಿದ್ದ ಓಮ್ನಿ ಕಾರು ಮುನ್ನೂರು ಗ್ರಾಮದ ಮಜಲುತೂಟ ಬಳಿ ಬೈಕ್‌ಗೆ ಡಿಕ್ಕಿ ಹೊಡೆದು ದಂಪತಿ, ಗಟ್ಟಿಕುದ್ರು ನಿವಾಸಿಗಳಾದ ರೋನಲ್ ಹಾಗೂ ಸುನೀತಾ ಗಾಯಗೊಂಡ ಘಟನೆ ಸೋಮವಾರ ನಡೆದಿದೆ.
omni (1)

omni
ಘಟನೆ ವಿವರ: ನೋಂದಣಿಯಾಗದ ಓಮ್ನಿ ಕಾರಿನಲ್ಲಿ ಪಜೀರು ಗೋವನಿತಾಶ್ರಯಕ್ಕೆ ಸೇರಿದ ಒಂದು ಗೋವನ್ನು ಕಳ್ಳತನಗೈದು ತೊಕ್ಕೊಟ್ಟು ಕಡೆಗೆ ಸಾಗಿಸಲಾಗುತ್ತಿತ್ತು. ಆದರೆ ನಿಯಂತ್ರಣ ಕಳೆದುಕೊಂಡ ಕಾರು ಚಾಲಕ ಕುತ್ತಾರು ಕಡೆಯಿಂದ ಎಲಿಯಾರುಪದವು ಕಡೆಗೆ ಬೈಕಿನಲ್ಲಿ ಸಂಚರಿಸುತ್ತಿದ್ದ ರೋನಲ್ ದಂಪತಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಗಾಯಗೊಂಡಿದ್ದು, ತೊಕ್ಕೊಟ್ಟುವಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲಕ ಮಾತ್ರ ಒಳಗಿದ್ದ ಜಾನುವಾರನ್ನು ಹೊರತೆಗೆದು ಕಟ್ಟಿ ಹಾಕಲು ಯತ್ನಿಸುತ್ತಿದ್ದಂತೆ ಸ್ಥಳೀಯರು ಜಮಾಯಿಸಿದರು. ಕೂಡಲೇ ತಾನು ಸಿಕ್ಕಿಬೀಳುವ ಮುನ್ಸೂಚನೆ ಅರಿತ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ ಕಾರು ಮತ್ತು ಜಾನುವಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸ್ಥಳಕ್ಕಾಗಮಿಸಿದ ಪಜೀರು ಗೋವನಿತಾಶ್ರಯ ಟ್ರಸ್ಟ್‌ನ ಸಿಬ್ಬಂದಿ ಆಶ್ರಮದಲ್ಲಿದ್ದ ಜಾನುವಾರನ್ನು ಮೇಯಿಸಲು ಬಿಟ್ಟ ಸಂದರ್ಭ ಕಳವು ನಡೆಸಲಾಗಿದೆ ಎಂದು ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಉಳ್ಳಾಲ ಠಾಣೆಯ ಮುಂದೆ ಮಜಲುತೋಟ ನಿವಾಸಿಗಳು ಜಮಾಯಿಸಿದ್ದಾರೆ.

By suddi9

Leave a Reply

Your email address will not be published. Required fields are marked *