ಮಂಗಳೂರು: ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಸಂಸ್ಥಾಪಕ ಯಾಸಿನ್ ಭಟ್ಕಳ್‌ನ ಆಪ್ತ ಪಾಕ್ ಪ್ರಜೆ ಜಿಯಾ- ವುರ್ ರೆಹಮಾನ್ ಆಲಿಯಾಸ್ ವಕಾಸ್ ಎಂಬಾತನನ್ನು ಮತ್ತೆ ಮಂಗಳೂರಿಗೆ ಕರೆತಂದು ವಿಚಾರಣೆ ನಡೆಸಲಾಗಿದೆ.

ಹೈದರಾಬಾದ್ ಎನ್‌ಐಎ ತಂಡ ಗುರುವಾರ ರಾತ್ರಿ ವಕಾಸ್‌ನನ್ನು ಬೆಂಗಳೂರು ಮೂಲಕ ಮಂಗಳೂರಿಗೆ ವಿಮಾನದಲ್ಲಿ ಕರೆತಂದು ರಾತ್ರಿಯೇ ಒಂದು ಸುತ್ತು ವಿಚಾರಣೆ ನಡೆಸಿದ್ದರು. ಶುಕ್ರವಾರ ಬೆಳಗ್ಗೆ ನಗರದ ನಾನಾ ಕಡೆಗಳಿಗೆ ತೆರಳಿ ತೀವ್ರ ವಿಚಾರಣೆ ನಡೆಸಿದ್ದಾರೆ. +

vakas

ವಕಾಸ್ ಬಂಧನವಾದ ಬಳಿಕ ಆತನನ್ನು ಹೊಸದಿಲ್ಲಿಯ ಭಯೋತ್ಪಾದನಾ ನಿಗ್ರಹ ದಳ ವಶಕ್ಕೆ ಪಡೆದಿತ್ತು. ಆ ಸಂದರ್ಭದಲ್ಲಿ ಆತನನ್ನು ದೇಶದ ನಾನಾ ಭಾಗಗಳಿಗೆ ಕರೆದೊಯ್ದು ವಿಚಾರಣೆ ನಡೆಸಲಾಗಿತ್ತು. ಏ.7ರಂದು ಆತನನ್ನು ಮಂಗಳೂರಿಗೂ ಕರೆತಂದಿದ್ದ ದಿಲ್ಲಿ ಎನ್‌ಐಎ ತಂಡ ಇಲ್ಲಿ ಮೊದಲ ಬಾರಿಗೆ ವಿಚಾರಣೆ ನಡೆಸಿತ್ತು.

ಇದೀಗ ಹೈದರಾಬಾದ್ ಸ್ಫೋಟಕ್ಕೆ ಸಂಬಂಧಿಸಿದಂತೆ ವಕಾಸ್‌ನನ್ನು ಹೈದರಾಬಾದ್ ಎನ್‌ಐಎ ತಂಡ ತನ್ನ ವಶಕ್ಕೆ ತೆಗೆದುಕೊಂಡಿದೆ. ಹೈದರಾಬಾದ್ ಸೊ್ಫೀೀಟಕ್ಕೂ ಮಂಗಳೂರಿನಲ್ಲಿ ಆಶ್ರಯ ಪಡೆದಿದ್ದ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಸದಸ್ಯರಿಗೂ ಲಿಂಕ್ ಇರುವ ಬಗ್ಗೆ ಮಾಹಿತಿ ಇರುವುದರಿಂದ ವಾಕಾಸ್‌ನನ್ನು ಮತ್ತೆ ಮಂಗಳೂರಿಗೆ ಕರೆತಂದು ವಿಚಾರಣೆ ನಡೆಸಲಾಗಿದೆ.

ಯಾಸಿನ್ ಭಟ್ಕಳ್, ರಿಯಾಜ್ ಭಟ್ಕಳ್ ಹಾಗೂ ಅಸದುಲ್ಲ ಸೇರಿದಂತೆ 10ಕ್ಕೂ ಹೆಚ್ಚು ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆ ಸದಸ್ಯರು ಮಂಗಳೂರು, ಅತ್ತಾವರ, ಉಳ್ಳಾಲ ಸೇರಿದಂತೆ ನಗರದ ನಾನಾ ಕಡೆ ವಾಸವಿದ್ದ ಬಗ್ಗೆ ಈ ಹಿಂದೆ ತನಿಖೆ ನಡೆಸಿದ ತನಿಖಾ ದಳಗಳು ಮಾಹಿತಿ ನೀಡಿದ್ದವು. ಇದೇ ಆಧಾರದಲ್ಲಿ ವಕಾಸ್‌ನನ್ನು ಉಗ್ರರು ತಂಗಿದ್ದ ಅತ್ತಾವರದ ಫ್ಲ್ಯಾಟ್‌ಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ. ಈ ಹಿಂದೆ ರಾಷ್ಟ್ರೀಯ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಯಾಸಿನ್ ಭಟ್ಕಳನ ಬಂಟ ಅಸದುಲ್ಲಾನನ್ನು ಮಂಗಳೂರಿಗೆ ಕರೆತಂದು ವಿಚಾರಣೆ ನಡೆಸಿದ್ದರು.

ಪಾಕ್ ಪ್ರಜೆ ವಕಾಸ್ ಫುಡ್ ಟೆಕ್ನಾಲಜಿಯಲ್ಲಿ ಡಿಪ್ಲೊಮಾ ಪದವಿ ಮಾಡುತ್ತಿದ್ದು, ಆತನ ಮನ ಪರಿವರ್ತನೆ ಮಾಡಿದ ಐಎಂ ಸಂಘಟನೆ ಆತನನ್ನು ಉಗ್ರ ಚಟುವಟಿಕೆಗಳಿಗೆ ಬಳಸಿತ್ತು ಎಂದು ತನಿಖೆ ವೇಳೆ ಆತ ಮಾಹಿತಿ ನೀಡಿದ್ದಾನೆ. ವಕಾಸ್‌ನನ್ನು ಮಾ. 22ರಂದು ಅಜ್ಮೀರ್‌ನಲ್ಲಿ ವಿಶೇಷ ಪೊಲೀಸರ ತಂಡ ಬಂಧಿಸಿತ್ತು

By suddi9

Leave a Reply

Your email address will not be published. Required fields are marked *