ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವದ ರಥೋತ್ಸವ ವಿಜೃಂಭಣೆಯಿದ ನಡೆಯಿತು. ಕೇರಳದ ಚೆಂಡೆವಾದನ ಬ್ಯಾಂಡ್ ವಾಲಗದೊಂದಿಗೆ ವಿಜ್ರಂಭಣೆಯಿದ ನಡೆಯಿತು. 6ಗಂಟೆಗೆ ರಥದಲ್ಲಿ ದೇವರ ಪೂಜೆ ನೆರವೇರಿಸಿ. ರಥಕ್ಕೆ ತೆಂಗಿನಕಾಯಿ ಹೊಡೆದು ಚಾಲನೆ ನೀಡಲಾಯಿತು. ದೇವಳದ ರಥಬೀದಿಯಲ್ಲಿ ಒಂದು ಸುತ್ತು ಎಳೆದು ಚೆಂಡಿನಗದ್ದೆಗೆ 1ಗಂಟೆಯ ಅಂತರದಲ್ಲಿ ಬಂದು ಚೆಂಡಿನಗದ್ದೆಗೆ ಭಂದು ಸಿಡಿ ಮದ್ದು ಪಟಾಕಿ ಸಿಡಿಸಿ ಕೇರಳದವರ ಚೆಂಡೆವಾದನ ರಥೋತ್ಸವಕ್ಕೆ ಮೆರುಗು ನೀಡಿತು. ರಥವನ್ನೇರಲು ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. ದೇವಳದ ಅರ್ಚಕರು ತಂತ್ರಿಗಳು ವಿದಿವಿದಾನಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಅರಣ್ಯ ಸಚಿವ ರಮಾನಾಥ ರೈ , ಮಾಜಿ ಸಚಿವ ನಾಗರಾಜಶೆಟ್ಟಿ , ಪವಿತ್ರಪಾಣಿ ಪ್ರಧಾನ ಅರ್ಚಕರಾದ ಮಾದವ ಭಟ್, ತಂತ್ರಿಗಳಾದ ಸುಭ್ರಹಣ್ಯ ತಂತ್ರಿ. ವೆಂಕಟೇಶ್ ತಂತ್ರಿ, ಅರ್ಚಕರಾದ ನಾರಾಯಣ ಭಟ್, ರಾಮ್ ಭಟ್, ಪರಮೇಶ್ವರ ಭಟ್ ಆಡಳಿತ ಮೊಕ್ತೇಸರ ಅಮ್ಮುಂಜೆಗುತ್ತು ಡಾ.ಮಂಜಯ್ಯ ಶೆಟ್ಟಿ, ಮಕ್ತೇಸರರಾದ ಉಳಿಪಾಡಿಗುತ್ತು ತಾರಾನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್ಉಪಸ್ಥಿತರಿದ್ದರು , ಉಳಿಪಾಡಿಗುತ್ತು ರಾಜೇಶ್ ನಾಕ್, ಜಿ. ಪಂ .ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸೇಸಪ್ಪ ಕೋಟ್ಯಾನ್ , ಅಮ್ಮುಂಜೆ ಗುತ್ತಿನವರು ಉಳಿಪಾಡಿಗುತ್ತಿನವರು ಸಾವಿರಾರು ದೇವಿ ಭಕ್ತರು ಉಪಸ್ಥಿತರಿದ್ದರು.












0








