ಬಂಟ್ವಾಳ: ಪಾಣೆಮಂಗಳೂರಿನ ನಿಷೇಧಿತ ಪ್ರದೇಶಗಳಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳು ಅಡ್ಡೆಗೆ ಬಂಟ್ವಾಳ ತಹಶೀಲ್ದಾರ್ ನೇತೃತ್ವದ ತಂಡ ಬುಧವಾರ ದಾಳಿ ನಡೆಸಿದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ವಲಸೆ ಕಾರ್ಮಿಕನೊಬ್ಬ ನೇತ್ರಾವತಿ ನದಿಗೆ ಜಿಗಿದು ನೀರಿನಲ್ಲಿ ಈಜಿ ಪರಾರಿಯಾಗುವ ಮೂಲಕ ತಹಶೀಲ್ದಾರ್ ಅವರನ್ನೇ ಪೇಚೆಗೆ ಸಿಲುಕಿಸಿದ.

ಖಚಿತ ವರ್ತವಾಣದ ಮೇರೆಗೆ ತಹಶೀಲ್ದಾರ್ ಪುರಂದರ ಹೆಗಡೆ ಮತ್ತು ಗ್ರಾಮ ಕರಣಿಕರಾದ ಬಸವರಾಜ್, ಸನಾದಿ, ಪ್ರಶಾಂತ್, ತಾಲೂಕು ಕಚೇರಿ ಸಿಬ್ಬಂದಿ ಸದಾಶಿವ, ಚಾಲಕ ವೆಲೆರಿಯನ್ ಡಿಸೋಜ ಅವರ ತಂಡ ಈ ದಾಳಿ ಕಾರ್ಯಚರಣೆಯನ್ನು ನಡೆಸಿತ್ತು.
