ಮೂಡುಬಿದರೆ: ವಿದ್ಯಾಗಿರಿಯ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ಮೂರು ದಿನಗಳು ನಡೆಯಲಿರುವ ರಾಜ್ಯ ಮಟ್ಟದ ಯುವಜನ ಮೇಳಕ್ಕೆ ಮಂಗಳವಾರ ರಾತ್ರಿ ಚಾಲನೆ ನೀಡಲಾಯಿತು. ಸಾಧಕರಿಗೆ ಯುವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಯುವಜನಮೇಳಕ್ಕೆ ಚಾಲನೆ ನೀಡಿ, `ಸಾಧನಾ’ ಸಂಚಿಕೆಯ ಬಿಡುಗಡೆಗೊಳಿಸಿದರು. ಯುವಜನರಲ್ಲಿ ಅಪಾರ ಪ್ರತಿಭೆಯಿದೆ. ಅದನ್ನು ಅಭಿವ್ಯಕ್ತಪಡಿಸಿ, ಸಾಮಥ್ರ್ಯವನ್ನು ಮತ್ತಷ್ಟು ಉತ್ತಮಪಡಿಸಲು ಯುವಜನಮೇಳ ಪೂರಕ. ವರ್ತಮಾನ ಸ್ಥಿತಿಯಲ್ಲಿ ಜನರ ನಡುವೆ ಅಪನಂಬಿಕೆಗಳು, ಅವಿಶ್ವಾಸ ಹೆಚ್ಚುತ್ತಿದ್ದು, ಇಂತಹ ಯುವಜನಮೇಳಗಳಿಂದ ಅಪನಂಬಿಕೆ ಹೋಗಲಾಡಿಸಿ, ಪರಸ್ಪರ ವಿಶ್ವಾಸ ನಂಬಿಕೆಯನ್ನು ಬೆಳೆಸಲು ಪೂರಕವಾಗುತ್ತದೆ. ದೇಶದ ಸಾಮಾಜಿಕ ಮತ್ತು ರಾಜಕೀಯ ಚಳುವಳಿಗಳ ಯಶಸ್ವಿನಲ್ಲಿ ಯುವಜನರ ಪಾತ್ರ ಮಹತ್ತರವಾಗಿದೆ. ಯುವಜನತೆ ಸಾಮಾಜಿಕ ಸಾಮರಸ್ಯವನ್ನು ಬೆಳೆಸಲು, ಮುಂದಿನಭವ್ಯ ಭಾರತವನ್ನು ಕಟ್ಟಲು ಯುವಜನತೆಯು ಮಹತ್ವದ ಪಾತ್ರ ವಹಿಸಬೇಕು ಎಂದರು.
ರಾಜ್ಯ ಯುವ ಪ್ರಶಸ್ತಿ ಪ್ರದಾನ: ಗಂಗಣ್ಣ ಬಿ.ಸಿ, ಪ್ರತಾಪ್ ಕುಮಾರ್ ಓ, ರಾಕೇಶ್ ಕೃಷ್ಣಾಜಿರಾವ್ ಕಾಂಬಳೇಕರ್, ಶೋಭದೇವರಾಜ್, ನಾಗರಾಜ್, ಕೆ.ಬಿ ರಂಗಸ್ವಾಮಿ, ಹನುಮಂತನಾಯಕ್ ಕೆ., ಎನ್ ಪ್ರಸನ್ನ, ಸಚಿನ್ ಮಹಾಬಲೇಶ್ವರ್ ನಾಯ್ಕ, ಮಹಿಬೂನ್ ಜೀಲಾನ್, ಗಂಗೊಳ್ಳಿ ಗುರುಜ್ಯೋತಿ ಸ್ಪೋಟ್ರ್ಸ್ ಕ್ಲಬ್, ಬೆಳಗಾವಿ ರಂಗದರ್ಶನ ಗ್ರಾಮೀಣ ಸಂಘಕ್ಕೆ ರಾಜ್ಯ ಯುವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೂಡುಬಿದರೆ ಪುರಸಭಾಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಉಪಾಧ್ಯಕ್ಷೆ ಶಕುಂತಳಾ ದೇವಾಡಿಗ, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ರಾಜ್ಯ ಯುವಜನ ಒಕ್ಕೂಟದ ಕಾರ್ಯದರ್ಶಿ ಡಾ.ಎಸ್ ಬಾಲಾಜಿ, ದ.ಕ ಜಿಲ್ಲಾ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪಾಂಡುರಂಗ ಗೌಡ, ಸಹಾಯಕ ನಿರ್ದೇಶಕಿ ಲಿಲ್ಲಿ ಪಾಯಸ್, ದ. ಕ ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ರಾಜೀವ್ ಸಾಲ್ಯಾನ್, ಗೌರವಾಧ್ಯಕ್ಷ ಶೈಲೇಶ್ ಉಪಸ್ಥಿತರಿದ್ದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಡಾ.ಪದ್ಮನಾಭ ಶೆಣೈ, ಚಂದ್ರಶೇಖರ ಗೌಡ, ಉದಯ ಮಂಜುನಾಥ್, ಡಾ.ಮಹಾಬಲೇಶ್, ಶಿವಪ್ರಸಾದ್, ಡಾ.ಡಿ.ಪ್ರಕಾಶ್, ನಾಗರಾಜ ಶೆಟ್ಟಿ, ಗುರುಪ್ರಸಾದ್, ಅಂಬರೀಶ್, ದೀರೇಂದ್ರ, ಡಾ.ಯೋಗೀಶ್ ಕೈರೋಡಿ ಸನ್ಮಾನ ಪತ್ರವಾಚಿಸಿದರು. ಪಡುಮಾರ್ನಾಡು ಯುವಕಮಂಡಲದ ಅಧ್ಯಕ್ಷ ರಮೇಶ್ ಶೆಟ್ಟಿ ವಂದಿಸಿದರು.
ಜಿಲ್ಲಾಡಳಿತ ದಕ್ಷಿಣ ಕನ್ನಡ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ, ಮೂಡುಬಿದರೆ ಪುರಸಭೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದರೆ, ಜಿಲ್ಲಾ ಯುವಜನ ಒಕ್ಕೂಟ ಹಾಗೂ ಪಡುಮಾರ್ನಾಡು ಯುವಕ ಮಂಡಲ ಜಂಟಿ ಆಶ್ರಯದಲ್ಲಿ ಯುವಜನಮೇಳ ನಡೆಯುತ್ತಿದೆ.
