ಬಂಟ್ವಾಳ:  ಬಂಟ್ವಾಳ  ತಾಲ್ಲೂಕಿನ ಸಜಿಪಮೂಡ ತಾಲ್ಲೂಕು ಪಂಚಾಯಿತಿ ಎಸ್‍ಡಿಪಿಐ ಅಭ್ಯರ್ಥಿಗೆ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಚಾಕುವಿನಿಂದ ಇರಿದು ಪರಾರಿಯಾದ ಘಟನೆ ಸೋಮವಾರ ರಾತ್ರಿ ಇಲ್ಲಿನ ಮಾರ್ನೆಬೈಲ್-ಬೋಗೋಡಿ ರಸ್ತೆಯಲ್ಲಿ ನಡೆದಿದೆ.
ಗಾಯಾಳುವನ್ನು ಇಲ್ಲಿನ ಕೊಳಕೆ ನಿವಾಸಿ ಪಿ.ಜೆ.ಯೂಸುಫ್ ಎಂಬವರ ಪುತ್ರ ಝಕರಿಯಾ ಮಲಿಕ್(30) ಎಂದು ಗುರುತಿಸಲಾಗಿದೆ. ಇವರು ತನ್ನ ಬೈಕ್‍ನಲ್ಲಿ ಬಂಟ್ವಾಳ ಸಂಬಂಧಿಕರ ಮನೆಗೆ ಹೋಗುತ್ತಿದ್ದ ವೇಳೆ ಎರಡು ಬೈಕ್‍ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಇಇದು ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಗಾಯಾಳುವನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ಸ್‍ಪೆಕ್ಟರ್ ಕೆ.ಯು. ಬೆಳ್ಳಿಯಪ್ಪ, ನಗರ ಠಾಣಾಧಿಕಾರಿ ನಂದಕುಮಾರ್, ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಎ.ಕೆ. ಮತ್ತಿತರರು ಘಟನಾ ಸ್ಥಳ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಜಮಾಯಿಸಿದ್ದ ಜನರ ಗುಂಪನ್ನು ಚದುರಿಸಿದರು.

By suddi9

Leave a Reply

Your email address will not be published. Required fields are marked *