ಬಂಟ್ವಾಳ: ವಿಟ್ಲ ಆರ್ ಕೆ ಆಟ್ರ್ಸ್ ನ ದಶಮಾನೋತ್ಸವ ಆಚರಣೆ ಪ್ರಯುಕ್ತ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೆಯ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಗೀತೆರಚನೆಕಾರ ರಮೇಶ್ ಆಚಾರ್ಯ ಮತ್ತು ಹಿನ್ನಲೆ ಗಾಯಕ ವಿ ಕೆ ಬಾಬು ಇವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಆರ್ ಕೆ ಆಟ್ರ್ಸ್ನ ರಾಜೇಶ್, ಸುರಕ್ಷಾ ಹೆಲ್ತ್ ಸೆಂಟರಿನ ಡಾ| ಗೀತಪ್ರಕಾಶ್, ಪ್ರಭಾಕರ ಆಚಾರ್ಯ, ಅಶೋಕ್ ಹಾಗು ಇತರರು ಉಪಸ್ಥಿತರಿದ್ದರು.
