ಬಂಟ್ವಾಳ ತಾಲ್ಲೂಕಿನ ಬಡ್ಡಕಟ್ಟೆ ಭಗವಾನ್ ಶ್ರೀ ನಿತ್ಯಾನಂದ ಗೋವಿಂದ ಸ್ವಾಮೀಜಿ ಭಜನಾ ಮಂದಿರದಲ್ಲಿ ವಾರ್ಷಿಕ ಪ್ರತಿಷ್ಠೆ ಮತ್ತು ಪಲ್ಲಕಿ ಉತ್ಸವ ಪ್ರಯುಕ್ತ ಇಲ್ಲಿನ ಸ್ವಾಮೀಜಿ ಪಂಚಲೋಹ ವಿಗ್ರಹಕ್ಕೆ ಬುಧವಾರ ವಿಶೇಷ ಪೂಜೆ ಸಮರ್ಪಿಸಲಾಯಿತು. ಟ್ರಸ್ಟಿ ಅಧ್ಯಕ್ಷ ಬಿ.ಯೋಗೀಶ ಸಪಲ್ಯ, ಗೌರವಾಧ್ಯಕ್ಷ ಸದಾನಂದ ಹೆಗ್ಡೆ ಮತ್ತಿತರರು ಇದ್ದರು.

