ಕೈಕಂಬ:ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಕರಿಯಂಗಳ ಗ್ರಾಮದ ಬಡಕ ಬೈಲ್ ವಿಶ್ವನಾಥ ಪೂಜಾರಿ ಎಂಬವರಿಗೆ ಸೇರಿದ ದಿನಸಿ ಅಂಗಡಿಯಿಂದ
ಸುಮಾರು 5ಲಕ್ಷ ರೂಪಾಯಿಯನ್ನು ಜ.8ರ ತಡರಾತ್ರಿ ಕಳವುಗೈದ ಪ್ರಕರಣ ಬೆಳಕಿಗೆ ಬಂದಿದೆ. ಎಂದಿನಂತೆ ವಿಶ್ವನಾಥ ಪೂಜಾರಿಯವರು ದಿನಸಿ ಅಂಗಡಿಯ ವ್ಯಾಪಾರ ಮುಗಿಸಿ ರಾತ್ರಿ 9 ಗಂಟೆಗೆ ಅಂಗಡಿಗೆ ಸಟರ್ ಹಾಕಿ ತಮ್ಮ ಮನೆಗೆ ಹೊರಟಿದ್ದರು.. ಜ.9 ರಂದು ಬೆಳಗ್ಗೆ 7.30 ಕ್ಕೆ ಬರುವಾಗ ಸಟರ್ ಮೇಲಕ್ಕೆ ಎತ್ತಿ ದ ಇತ್ತು ಬಾಗಿಲು ತೆರೆದ ಸ್ಥಿಯಲ್ಲಿ ಮತ್ತು ಬೀಗ ಅದರ ಜಗಲಿಯಲ್ಲಿ ಇತ್ತು. ವಿಶ್ವನಾಥಪೂಜಾರಿಯವರು ಅಂಗಡಿಯ ಒಳಗೆ ಹೋಗಿ ನೋಡಿದಾಗ ಮನೆ ಜಾಗ ಕರಿದಿಸಲು ಇಟ್ಟ 5ಲಕ್ಷ ಹಣವು ಕಾಣೆಯಾಗಿತ್ತು.ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದರು.ಇನ್ಸ್ಮಪೆಕ್ಟರ್ ಠಾಣಾಧಿಕಾರಿ ರಕ್ಷಿತ್ ಕುಮಾರ್ ಸ್ಥಳಕ್ಕೆ ದಾವಿಸಿ ಪ್ರಕಟರಣ ಕೈಗೆತ್ತಿಕೊಂಡಿದ್ದಾರೆ. ಶ್ವಾನ ದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಿದ್ದಾರೆ. ಈ ನಡುವೆ ಎ.ಸಿ.ಪಿ ರಾಹುಲ್ ಕುಮಾರ್ ಸ್ಥಳಕ್ಕೆ ದಾವಿಸಿ ತಣಿಕೆಯನ್ನು ಚುರುಕುಗೊಳಿಸಿದ್ದಾರೆ.












