ಬಂಟ್ವಾಳ: ಮಂಚಿ ಕುಕ್ಕಾಜೆಯ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ನಡೆಯುತ್ತಿತವ ಅಖಂಡ ಭಜನಾ ಸಪ್ತಹಾದ 5ನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತಾ ಸಂಸ್ಥಾನಂನ ಸಾಧ್ವಿ ಶ್ರೀ ಮಾತಾನಂದಮಯಿ ಆಶೀರ್ವಚನ ನೀಡಿದರು.

ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಡಿ.ಎಂ.ಕುಲಾಲ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೈದ್ಯ ಡಾ. ವಿಶ್ವನಾಥ ನಾಯಕ್, ಸಾಹಿತಿ ವಿಜಯಶೆಟ್ಟಿ ಸಾಲೆತ್ತೂರು, ಉದ್ಯಮಿ ತಾರಾನಾಥ ಕೊಟ್ಟಾರಿ, ಕ್ಷೇತ್ರದ ಸಂಚಾಲಕ ಕೈಯ್ಯೂರು ನಾರಾಯಣ ಭಟ್, ಸಂಜೀವ ಮದನಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
