ಮೂಡಬಿದರೆ: ಆಳ್ವಾಸ್ ನುಡಿಸಿರಿಯ ಎರಡನೇ ದಿನ ಬರಪೂರ ಸಾಂಸ್ಕ್ರತಿಕ ಕಾರ್ಯಕ್ರಮ ನಡೆದು ಕಲಾರಸಿಕರ ಮನ ರಂಜಿಸಿತು. ನಾಡಿನ ಪ್ರಖ್ಯಾತ ಕಲಾವಿದರೊಂದಿಗೆ ಯುವ ಹಾಗೂ ಸ್ಥಳೀಯ ಕಲಾವಿದರಿಗೂ ನುಡಿಸಿರಿ ವೇದಿಕೆಯಾಯಿತು.

ರತ್ನಾಕರವರ್ಣಿ ವೇದಿಕೆಯಲ್ಲಿ ದಾಸರದ ಪದಗಳು , ಕೆ.ವಿ ಸುಬ್ಬಣ ಬಯಲು ರಂಗಮಂದಿರದಲ್ಲಿ ಜನಪದ ಗಾಯನ, ಜಯಲಕ್ಷ್ಮೀ ಆಳ್ವ ವೇದಿಕೆಯಲ್ಲಿ ಕರ್ನಾಟಕ ಶಾಸ್ತ್ರೀಯ ಗಾಯನ, ಬಿ.ವಿ ಕಾರಂತ ವೇದಿಕೆ ಮೈಸೂರು ಸಂಕಲ್ಪ ತಂಡದಿಂದ ಜತೆಗಿರುವನು ಚಂದಿರ ನಾಟಕ ಪ್ರದರ್ಶನಗೊಂಡಿತು. ಮಿಮಿಕ್ರಿ ದಯಾನಂದ, ಇಂದುಶ್ರೀ ಅವರ ಮಾತನಾಡುವ ಗೊಂಬೆ, ಉಮೇಶ್ ಮಿಜಾರು ತಂಡದಿಂದ ತೆಲಿಕೆದ ಗೊಂಚಿಲ್ ಕಾರ್ಯಕ್ರಮಗಳು ಕೆ.ಎನ್.ಟೈಲರ್ ವೇದಿಕೆಯಲ್ಲಿ ಪ್ರೇಕ್ಷಕರನ್ನು ಹಾಸ್ಯದ ಕಡಲಲ್ಲಿ ತೇಲಿಸಿತು. ಮಾ.ವಿಠಲ ಶೆಟ್ಟಿ ವೇದಿಕೆಯಲ್ಲಿ ವಚನ ಗಾಯನ, ಜನಪದ ಝೆಂಕಾರ ಸಪ್ತ ತಾಂಡವ ಸಹಿತ ಶಾಸ್ತ್ರೀಯ, ಜನಪದ ಕಾರ್ಯಕ್ರಮಗಳು ನಡೆಯಿತು. ಕು.ಶಿ ಹರಿದಾಸ ಭಟ್ ವೇದಿಕೆಯಲ್ಲಿ ನೃತ್ಯರೂಪಕ ನಡೆಯಿತು.
ಸಾಂಸ್ಕøತಿಕ ಕಾರ್ಯಕ್ರಮಗಳು ಮನಸ್ಸಿಗೆ ತಂಪು ನೀಡಿದರೆ, ವಿದ್ಯಾಗಿರಿಯಲ್ಲಿ ಹಾಕಲಾದ ವಿದ್ಯುತ್ ದೀಪಾಲಂಕರ ನೆರೆದವರು ಕಣ್ಣನ್ನು ತಂಪಾಗಿಸಿತು.





