ಸುರತ್ಕಲ್: ಗುರುಪುರ ಹೋಬಳಿಯ ತಾರಿಕರಿಯ ಮಾಣೈಬೆಟ್ಟು ನೂತನ ಕಾಂಕ್ರಿಟ್ ರಸ್ತೆಯನ್ನು ಮಂಗಳೂರು ಉತ್ತರ ವಲಯ ಶಾಸಕಮೊಯ್ದಿನ್ ಬಾವಾ ಉದ್ಘಾಟಿಸಿದರು.
tarikariya road bavaಈ ಸಂದರ್ಭ ಸುದ್ದಿಗರರೊಂದಿಗೆ ಮಾತನಾಡಿದ ಅವರು, ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರಕಾರ ಗ್ರಾಮೀಣ ಭಾಗದ ಒಳ ರಸ್ತೆಗಳನ್ನು ಅಭಿವೃದ್ಧಿ ಗೊಳಿಸುವ ಬಗ್ಗೆ ಚಿಂತಿಸಿದ ಫಲವಾಗಿ ಶಾಸಕರ ಗ್ರಾಮೀಣ ಪ್ರದೇಶ ಅಭಿವೃದ್ಧಿ ನಿಧಿಯಿಂದ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದರು.
ರಸ್ತೆ ನಿರ್ಮಾಣಕ್ಕೆ ಸ್ಥಳೀಯರೊಬ್ಬರು ತನ್ನ ಖಾಸಗಿ ಜಮೀನನ್ನು ನೀಡಿದ್ದು, ಅವರ ಸಮಾಜ ಸೇವೆ ಕೃತಜ್ಞತಾ ಪೂರ್ವವಾದುದು. ಅವರಿಗೆ ಗ್ರಾಮಸ್ಥರು ಹಾಗೂ ನಾನೂ ಚಿರಋಣಿ ಎಂದರು.
ಈ ಸಂದರ್ಭ ಗುರುಪುರ ಗ್ರಾಮ ಪಂಚಾಯತ್‍ನ ಮಾಜೀ ಅಧ್ಯಕ್ಷ ಯು.ಪಿ. ಇಬ್ರಾಹಿಂ, ಸದಸ್ಯರಾದ ಟಿ. ಹನೀಫ್, ಯಶವಂತ ವಿ.ಶೆಟ್ಟಿ, ನೂರು ಇಸ್ಲಾಂ ಮಸೀದಿಯ ಅಧ್ಯಕ್ಷ ರಫೀಕ್, ಇಹ್‍ಸಾನುಲ್ ಮುಸ್ಲಿಮೀನ್ ಯಂಗ್‍ಮೆನ್ಸ್‍ನ ಅಧ್ಯಕ್ಷ ಮುಹಮ್ಮದ್ ರಫೀಕ್ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *